ಇತ್ತೀಚಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಮದುವೆ ಮುರಿದು ಬೀಳುತ್ತಿವೆ. ಸಾಕಷ್ಟು ನಿರೀಕ್ಷೆ, ಕನಸುಗಳು ಚಿಕ್ಕ ಚಿಕ್ಕ ಕಾರಣಕ್ಕೆ ಕಮರಿಹೋಗುತ್ತಿವೆ. ಸಂಬಂಧವನ್ನು ಹೇಗೆ ಕಾಪಿಟ್ಟುಕೊಳ್ಳಬೇಕು ಎಂಬುದಕ್ಕೆ ಲೇಖಕಿ ಸುಧಾಮೂರ್ತಿ ಒಂದಷ್ಟು ಮಾಹಿತಿ ನೀಡಿದ್ದಾರೆ. ಇದು ನಿಮಗೆ ಸಹಾಯವಾಗಬಹುದು ನೋಡಿ.
ಸಂಬಂಧಗಳಲ್ಲಿ ಇಂದು ಪ್ರೀತಿಗಿಂತ ಹಣವೇ ಮುಖ್ಯವಾಗುತ್ತಿದೆ. ಇದು ಸಂಬಂಧವನ್ನು ಮುರಿಯಲು ಕಾರಣವಾಗುತ್ತಿದೆ. ಜೀವನದಲ್ಲಿ ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು ಎಲ್ಲಾ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ.
ಪ್ರೀತಿಯೊಂದಿಗೆ ಗೌರವವೂ ಸಂಬಂಧಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಂತೋಷ, ದುಃಖ, ಬಡತನ ಶ್ರೀಮಂತಿಕೆ ಯಾವುದೇ ಇರಲಿ, ಒಬ್ಬರನ್ನೊಬ್ಬರು ಗೌರವಿಸಿ ಹಾಗೂ ಪ್ರೀತಿಸಿ. ಇದರಿಂದ ಬಾಳು ಸುಂದರವಾಗುತ್ತದೆ.
ಒಳ್ಳೆಯ ಸಮಯ ಹಾಗೂ ಕೆಟ್ಟ ಸಮಯ ಎಂಬುದು ಎಲ್ಲರ ಬದುಕಿನಲ್ಲಿ ಬಂದೇ ಬರುತ್ತದೆ. ಅಂತಹ ಸಂದರ್ಭದಲ್ಲಿ ಜೊತೆಯಾಗಿ ನಿಂತು ಎಲ್ಲವನ್ನೂ ಎದುರಿಸಿದಾಗ ಸಮಸ್ಯೆ ಮಂಜಿನಂತೆ ಕರಗಿ ಹೋಗುತ್ತದೆ. ಆ ಸಾಮರ್ಥ್ಯ ನಿಮ್ಮಲಿರಲಿ ಎಂದು ಆಶಿಸುತ್ತಾರೆ ಸುಧಾಮೂರ್ತಿ.