Kannada Duniya

ಪೋಷಕರೇ ಮಕ್ಕಳನ್ನು ಬೆಳೆಸುವಾಗ ಈ ವಿಚಾರ ಗಮನದಲ್ಲಿರಲಿ!

ಭಾರತೀಯ ಯೋಗಿ ಸದ್ಗುರು ಬಗ್ಗೆ ತಿಳಿಯದವರಾರು? ಆಧ್ಯಾತ್ಮಿಕ ಸಂದೇಶ ನೀಡುವ ಅವರು ಮಕ್ಕಳ ಪಾಲನೆ ವಿಚಾರದಲ್ಲಿ ಹೆತ್ತವರ ಜವಾಬ್ದಾರಿಯೇ ದೊಡ್ಡದು ಎಂಬುದನ್ನು ಹೀಗೆ ತಿಳಿಸಿದ್ದಾರೆ.

ಮಕ್ಕಳನ್ನು ಹೊಂದುವುದು ಮಾತ್ರವಲ್ಲ, ಅವರೊಂದಿಗೆ ಸಮಯ ಕಳೆಯುವುದು ಕೂಡಾ ಸಂತಸದ ಸಂಗತಿಯೇ. ಅವರನ್ನು ನಿಮ್ಮ ಭವಿಷ್ಯದ ಹೂಡಿಕೆ ಎಂದು ತಿಳಿದುಕೊಳ್ಳದೆ ಅವರೊಂದಿಗೆ ಸಮಯ ಕಳೆಯುವುದು ಕೂಡ ಅಷ್ಟೇ ಮುಖ್ಯ.

ನಿಮ್ಮ ಮಗು ಹೇಗಿರಬೇಕೆಂದು ಇರಲು ಬಯಸುತ್ತದೋ, ಹಾಗೇ ಇರಲು ಬಿಡಿ. ನಿಮಗೆ ಬೇಕಾದಂತೆ ರೂಪುಗೊಳಿಸುವುದು ತಪ್ಪು. ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಾಧನೆ ಮಗು ಮಾಡಬಹುದು. ಅದಕ್ಕೆ ಅವಕಾಶ ಮಾಡಿಕೊಡಿ.

ಮಕ್ಕಳ ಬಾಲ್ಯವನ್ನು ಉಸಿರುಗಟ್ಟಿಸದಿರಿ. ಅವರಿಗೆ ಎಲ್ಲಾ ಕ್ಷಣಗಳನ್ನು ಅನುಭವಿಸಲು, ಕಲಿಯಲು ಬಿಡಿ. ಮಕ್ಕಳೇ ನಿಮ್ಮಂತೆ ವರ್ತಿಸಬೇಕು ಎಂದು ಬಯಸುವುದು ತಪ್ಪು.

ಮಕ್ಕಳಿಗೆ ಬೆಳೆಯಲು ಅನುಕೂಲವಾಗುವ ಉತ್ತಮ ವಾತಾವರಣ ಸೃಷ್ಟಿಸಿ. ಅವರೊಂದಿಗೆ ನೀವು ಸಮಯ ಕಳೆಯಿರಿ. ಅವರು ಓದುವಾಗ ನೀವೂ ಪುಸ್ತಕ ಹಿಡಿದು ಓದಿ, ಇಲ್ಲವೇ ಬರೆಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...