Kannada Duniya

ಈ ವಿಚಾರಗಳು ನಿಮ್ಮ ವಿಚ್ಛೇದನಕ್ಕೆ ಕಾರಣವಾಗಬಹುದು

ಮದುವೆಯ ನಂತರ ಸಂಗಾತಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ಇಬ್ಬರು ಸೇರಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕು. ಇಲ್ಲವಾದರೆ ನಿಮ್ಮ ಮಧ್ಯೆ ಜಗಳವಾಗಬಹುದು. ಆದರೆ ಕೆಲವೊಮ್ಮೆ ಇದು ನಿಮ್ಮ ದಾಂಪತ್ಯ ಜೀವನಕ್ಕೆ ಮಾರಕವಾಗಬಹುದಂತೆ.

ದಂಪತಿಗಳು ಒಟ್ಟಿಗೆ ವಾಸಿಸುವಾಗ ನಿಮ್ಮ ಮಧ್ಯೆ ಯಾವುದೇ ವಿಚಾರವನ್ನು ಕುಳಿತು ಮಾತನಾಡಬೇಕು. ಆಗ ಅದಕ್ಕೆ ಪರಿಹಾರವನ್ನು ಕಂಡುಹಿಡಿಯಬಹುದು. ಆದರೆ ನಿಮ್ಮ ನಡುವೆ ಸಂವಹನದ ಕೊರತೆಯಾದರೆ, ನೀವು ಯಾವಾಗಲೂ ಮೌನವಾಗಿದ್ದರೆ ಇದರಿಂದ ನಿಮ್ಮ ಸಂಬಂಧ ಕೆಡಬಹುದು.

ನಿಮ್ಮಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಒಬ್ಬರು ಸೋಲುವ ಮನೋಭಾವವನ್ನು ಹೊಂದಿರಬೇಕು. ಆದರೆ ನೀವು ಅಹಂಕಾರವನ್ನು ತೋರಿಸಿದರೆ ಇದು ನಿಮ್ಮ ದಾಂಪತ್ಯ ಜೀವನಕ್ಕೆ ಮಾರಕವಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...