ಹಲವರಲ್ಲಿ ಆರ್ಥಿಕ ಸಮಸ್ಯೆಗಳು ಕಾಡುತ್ತದೆ. ಜನರು ಎಷ್ಟೇ ದುಡಿದರೂ ಅವರಿಗೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಸಾಲದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅವರು ಜೀವನದಲ್ಲಿ ಸಂಕಷ್ಟವನ್ನು ಎದುರಿಸುತ್ತಾರೆ. ಹಾಗಾಗಿ ಜೀರಿಗೆಯಿಂದ ಈ ಪರಿಹಾರವನ್ನು ಮಾಡಿ.
ನೀವು ಬುಧವಾರದಂದು ಯಾವ ಸಮಯದಲ್ಲಾದರೂ ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡು ಅದನ್ನು ತುಟಿಯನ್ನು ಮುಂದೆ ಮಾಡಿ ತುಟಿಯೊಳಗೆ ಹಾಕಿಕೊಳ್ಳಿ.
ನಂತರ ಕಣ್ಣನ್ನು ಮುಚ್ಚಿ ಶಾಂತವಾಗಿ “ಓಂ ರಾಹುಯೇ ನಮಃ” ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಆಮೇಲೆ ನಂತರ ಆ ಜೀರಿಗೆ ಜಗಿದು ತಿಂದು ನೀರನ್ನು ಕುಡಿಯಿರಿ.
ಇದರಿಂದ ಹಣದ ಆಕರ್ಷಣೆಯಾಗುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಶಾಂತಿ ನೆಲೆಸಿರುತ್ತದೆ. ನೀವು ಸಾಲವಾಗಿ ಕೊಟ್ಟ ಹಣ ಹಿಂತಿರುಗಿ ಬರುತ್ತದೆ. ಹಾಗೇ ನಿಮ್ಮ ಆಸ್ತಿ ಖರೀದಿಸುವ, ಮನೆ ಕಟ್ಟುವ ಕನಸು ನನಸಾಗುತ್ತದೆ.