ಮಹಾಶಿವರಾತ್ರಿ ಹಿಂದೂಗಳಿಗೆ ವಿಶೇಷವಾದ ಹಬ್ಬವಾಗಿದೆ. ಈ ದಿನ ಶಿವ ಪಾರ್ವತಿ ವಿವಾಹವಾದರೆಂಬ ನಂಬಿಕೆ ಇದೆ. ಹಾಗಾಗಿ ಈ ದಿನ ಶಿವ ಕುರಿತು ವ್ರತ, ಪೂಜೆಯನ್ನು ಮಾಡಲಾಗುತ್ತದೆ. ಹಾಗಾಗಿ ಇಂತಹ ವಿಶೇಷವಾದ ದಿನದಂದು ರಾತ್ರಿ 12 ಗಂಟೆಗೆ ಈ ಕೆಲಸವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಮಹಾಶಿವರಾತ್ರಿಯ ದಿನ ಧಾತುರವನ್ನು ತಂದು ರಾತ್ರಿ 12 ಗಂಟೆಗ ನಿಮ್ಮ ಮನೆ ಬಳಿ ಇರುವ ಶಿವನ ದೇವಾಲಯದಲ್ಲಿ ಅರ್ಪಿಸಿ. ನಂತರ ಅದನ್ನು ಅಲ್ಲಿಂದ ಮನೆಗೆ ತನ್ನಿ. ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಸಂಪತ್ತು, ಉದ್ಯೋಗ ಅಥವಾ ವ್ಯಾಪಾರದ ಸ್ಥಳದಲ್ಲಿ ಇಡಬೇಕಂತೆ.
ಇದರಿಂದ ನಿಮಗೆ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳಿದ್ದರೆ ಅದು ನಿವಾರಣೆಯಾಗುತ್ತದೆಯಂತೆ. ಹಾಗೇ ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅದು ವಾಸಿಯಾಗುತ್ತದೆಯಂತೆ. ನೀವು ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ನಿವಾರಣೆಯಾಗುತ್ತದೆಯಂತೆ.