Kannada Duniya

ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ದೂರಮಾಡಿ ಅರಿಶಿನವನ್ನು ಬಳಸಿ…!

ಅರಿಶಿನವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಔಷಧೀಯ ಗುಣಗಳಿಂದ ಕೂಡಿದೆ. ಹಾಗೇ ಅರಿಶಿನಕ್ಕೆ ಧಾರ್ಮಿಕ ಪ್ರಾಮುಖ್ಯತೆ ಹೆಚ್ಚಿದೆ. ಜೀವನವನ್ನು ಸಂತೋಷಪಡಿಸಲು ಇಂತಹ ಅನೇಕ ಪರಿಹಾರಗಳನ್ನು ಮಾಡಲು ಅರಿಶಿನ ಬಳಕೆ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಅರಿಶಿನದಲ್ಲಿ ದೈವಿಕ ಗುಣಗಳಿವೆ. ಇದನ್ನು ಬಳಸಿ ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಬಿಳಿ ಬಣ್ಣದ ದಾರಕ್ಕೆ ಅರಿಶಿನ ಹಚ್ಚಿ. ನಿಮ್ಮ ಕೈ ಮತ್ತು ಕುತ್ತಿಗೆಗೆ ಧರಿಸುವುದರಿಂದ ಗುರು ಗ್ರಹವನ್ನು ಬಲಪಡಿಸಬಹುದು. ಅಲ್ಲದೇ ವೃತ್ತಿಗೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಣೆ ಮಾಡಲು ಗುರುವಾರ ಒಂದು ಚಿಟಿಕೆ ಅರಿಶಿನವನ್ನು ಸ್ನಾನದ ನೀರಿನಲ್ಲಿ ಹಾಕಬೇಕು. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಹವನದ ಸಮಯದಲ್ಲಿ ಅರಿಶಿನದ ಬಳಕೆಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಕೆಲಸದಲ್ಲಿ ಪ್ರಗತಿಯನ್ನು ಕಾಣಲು ಹಸಿರು ಏಲಕ್ಕಿಯಿಂದ ಈ ಪರಿಹಾರ ಮಾಡಿ….!

ಇದು ನಕರಾತ್ಮಕತೆಯನ್ನು ನಿವಾರಣೆ ಮಾಡುತ್ತದೆ. ಹಾಗಾಗಿ ಗುರುವಾರ ಮನೆಯ ತುಂಬಾ ಅರಿಶಿನ ನೀರನ್ನು ಚಿಮುಕಿಸಿದರೆ ತಾಯಿ ಲಕ್ಷ್ಮಿಯ ಆಶೀರ್ವಾದ ಯಾವಾಗಲೂ ಜನರ ಮೇಲೆ ಇರುತ್ತದೆ. ನಿಮ್ಮ ಹಣ ತುಂಬಾ ಖರ್ಚಾಗುತ್ತಿದ್ದರೆ ಅರಿಶಿನ, ಸಿಂಧೂರ ಮತ್ತು ಬೆಳ್ಳಿ ಪೆಟ್ಟಿಗೆಯಲ್ಲಿ ಇಟ್ಟರೆ ನಿಮ್ಮ ವೆಚ್ಚಗಳು ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...