ತುಳಸಿ ಗಿಡವನ್ನು ಹಿಂದೂಧರ್ಮದಲ್ಲಿ ಪವಿತ್ರವೆಂದು ನಂಬಲಾಗುತ್ತದೆ. ತುಳಸಿಯನ್ನು ಲಕ್ಷ್ಮಿದೇವಿಯ ಸ್ವರೂಪವಾಗಿದೆ. ಇದರಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿ ಇಂತಹ ಪವಿತ್ರವಾದ ತುಳಸಿಗಿಡವನ್ನು ಸೂಕ್ತ ಸ್ಥಳದಲ್ಲಿ ನೆಟ್ಟು ಹಣದ ಸಮಸ್ಯೆಯನ್ನು ದೂರಮಾಡಿ.
ಮನೆಯಲ್ಲಿ ಅನಾವಶ್ಯಕ ಜಗಳವನ್ನು ಕೊನೆಗಾಣಿಸಲು ಅಡುಗೆ ಮನೆಯ ಬಳಿ ತುಳಸಿ ಗಿಡವನ್ನು ಇಡಿ. ಇದರಿಂದ ಮನೆಯಲ್ಲಿನ ಜಗಳಗಳು ಕೊನೆಗೊಳ್ಳುತ್ತದೆ.
ಮನೆಯಲ್ಲಿ ವಾಸ್ತುದೋಷವಿದ್ದರೆ ಅದನ್ನು ನಿವಾರಿಸಲು ತುಳಸಿ ಗಿಡವನ್ನು ಆಗ್ನೇಯದಿಂದ ವಾಯುವ್ಯದವರೆಗೆ ಎಲ್ಲಿಯಾಧರೂ ಇಡಿ. ಇದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ.
ಮಗುವಿನ ಮೊಂಡುತನವನ್ನು ಹೋಗಲಾಡಿಸಲು ಪೂರ್ವ ದಿಕ್ಕಿನ ಯಾವುದೇ ಕಿಟಕಿಯಲ್ಲಿ ತುಳಸಿ ಗಿಡವನ್ನು ಇರಿಸಿ.
ನಿಮಗೆ ಅದೃಷ್ಟ ಬರದಿದ್ದರೆ ಈ ಸಲಹೆಗಳನ್ನು ಅನುಸರಿಸಿ
ಮಗಳ ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಆಗ್ನೇಯದಿಂದ ವಾಯುವ್ಯದವರೆಗೆ ತುಳಸಿ ಗಿಡವನ್ನು ಇಟ್ಟು ಮಗಳ ಬಳಿ ಪ್ರತಿದಿನ ನೀರು ಹಾಕಲು ಹೇಳಿ.
ಹಣದ ಸಮಸ್ಯೆಯನ್ನು ನಿವಾರಿಸಲು ತುಳಸಿ ಗಿಡವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ನೆಡಿ. ಪ್ರತಿದಿನ ತುಳಸಿಗೆ ದೀಪವನ್ನು ಹಚ್ಚಿ.