ಗುರುವಾರ ವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಗುರುವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಬೇಕು. ಇಲ್ಲವಾದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ಹಾಗಾಗಿ ಗುರುವಾರದಂದು ಈ ಕೆಲಸಗಳನ್ನು ಮಾಡಬೇಡಿ.
ಗುರುವಾರ ಮಹಿಳೆಯರು ಕೂದಲನ್ನು ತೊಳೆಯುವುದನ್ನು ಮಾಡಬಾರದು. ಇದರಿಂದ ಗುರುವು ಅಶುಭ ಪರಿಣಾಮವನ್ನು ಬೀರುತ್ತಾನೆ. ಹಾಗೇ ಈ ದಿನ ಉಗುರುಗಳನ್ನು ಕತ್ತರಿಸಬಾರದು. ಹಾಗೇ ಕೂದಲನ್ನು ಕತ್ತರಿಸಬಾರದು.
ಈ ದಿನ ಹಣದ ವಹಿವಾಟನ್ನು ಮಾಡಬಾರದು. ಇದರಿಂದ ಗುರು ದುರ್ಬಲನಾಗುತ್ತಾನೆ. ಇದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತೀರಿ.
ಪಿತೃಪಕ್ಷದಲ್ಲಿ ತರ್ಪಣ ಬಿಡುವಾಗ ಈ ಹೂಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ…!
ಗುರುವಾರದ ದಿನ ಬಾಳೆಹಣ್ಣನ್ನು ಸೇವಿಸಬೇಡಿ. ಯಾಕೆಂದರೆ ವಿಷ್ಣು ಬಾಳೆಮರದಲ್ಲಿ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ.
ಗುರುವಾರದಂದು ತಂದೆಯನ್ನು ಅವಮಾನಿಸಬಾರದು. ಇದರಿಂದ ಗುರು ಕೋಪಗೊಳ್ಳುತ್ತಾನೆ. ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ.