Kannada Duniya

ಗುರುವಾರ ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳಂತೆ….!

ಗುರುವಾರ ವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಗುರುವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಬೇಕು. ಇಲ್ಲವಾದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ಹಾಗಾಗಿ ಗುರುವಾರದಂದು ಈ ಕೆಲಸಗಳನ್ನು ಮಾಡಬೇಡಿ.

ಗುರುವಾರ ಮಹಿಳೆಯರು ಕೂದಲನ್ನು ತೊಳೆಯುವುದನ್ನು ಮಾಡಬಾರದು. ಇದರಿಂದ ಗುರುವು ಅಶುಭ ಪರಿಣಾಮವನ್ನು ಬೀರುತ್ತಾನೆ. ಹಾಗೇ ಈ ದಿನ ಉಗುರುಗಳನ್ನು ಕತ್ತರಿಸಬಾರದು. ಹಾಗೇ ಕೂದಲನ್ನು ಕತ್ತರಿಸಬಾರದು.

ಈ ದಿನ ಹಣದ ವಹಿವಾಟನ್ನು ಮಾಡಬಾರದು. ಇದರಿಂದ ಗುರು ದುರ್ಬಲನಾಗುತ್ತಾನೆ. ಇದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತೀರಿ.

ಪಿತೃಪಕ್ಷದಲ್ಲಿ ತರ್ಪಣ ಬಿಡುವಾಗ ಈ ಹೂಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ…!

ಗುರುವಾರದ ದಿನ ಬಾಳೆಹಣ್ಣನ್ನು ಸೇವಿಸಬೇಡಿ. ಯಾಕೆಂದರೆ ವಿಷ್ಣು ಬಾಳೆಮರದಲ್ಲಿ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ.

ಗುರುವಾರದಂದು ತಂದೆಯನ್ನು ಅವಮಾನಿಸಬಾರದು. ಇದರಿಂದ ಗುರು ಕೋಪಗೊಳ್ಳುತ್ತಾನೆ. ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...