ಹಿಂದೂಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯಲ್ಲಿ ಸಮಸ್ಯೆ ಕಂಡುಬಂದರೆ ಅದಕ್ಕೆ ಮನೆಯ ಕೆಟ್ಟ ವಾಸ್ತುಗಳೇ ಕಾರಣ. ಆದರೆ ಹೆಚ್ಚಿನವರು ಮನೆಯ ವಾಸ್ತುವಿನ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ವಿಶೇಷ ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಹಣದ ಕೊರತೆ ಕಾಡಲ್ಲ.
-ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಕಾಡುತ್ತಿದ್ದರೆ ಮನೆಯ ಮುಖ್ಯ ಬಾಗಿಲಿನಲ್ಲಿ ಸಿಂಧೂರದಿಂದ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ. ಇದರಿಂದ ನಕರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ.
-ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಜುವ ಮೀನಿನ ಚಿತ್ರವಿದ್ದರೆ ತುಂಬಾ ಒಳ್ಳೆಯದು. ಇಲ್ಲವಾದರೆ ಮನೆಯಲ್ಲಿ ಅಕ್ವೇರಿಯಮ ಅನ್ನು ಸಹ ಇಡಬಹುದು. ಇದರಿಂದ ಮನೆಯಲ್ಲಿ ಹಣ, ಧಾನ್ಯಗಳ ಕೊರತೆ ಕಾಡಲ್ಲ.
ಶ್ರೀಕೃಷ್ಣನನ್ನು ಕನಸಿನಲ್ಲಿ ನೋಡುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಿರಿ….!
-ಅಗರಬತ್ತಿಗಳನ್ನು ಬೆಳಗಿಸುವುದರಿಂದ ಮನೆಯ ವಾತಾವರಣವು ಸಂತೋಷಕರವಾಗಿರುತ್ತದೆ ಮತ್ತು ಪರಿಮಳಯುಕ್ತವಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯ ಮೂಲೆಗಳಲ್ಲಿ ಧೂಪದ್ರವ್ಯವನ್ನು ಇರಿಸಿ.