Kannada Duniya

Ashoka tree: ಈ ಮರವು ಮನೆಯ ವಾಸ್ತು ದೋಷವನ್ನು ಹೋಗಲಾಡಿಸುತ್ತದೆ…!

ಅನೇಕ ಮರಗಳು , ಸಸ್ಯಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಮರಗಳನ್ನು ನೆಟ್ಟರೆ ಅದು ನಕರಾತ್ಮಕತೆಯನ್ನು ಹೋಗಲಾಡಿಸಿ ಸಕರಾತ್ಮಕತೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಅಶೋಕ ಮರ ಕೂಡ ಒಂದು. ಇದನ್ನು ನೆಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ , ಶಾಂತಿ ನೆಲೆಸಿರುತ್ತದೆಯಂತೆ.

ಮನೆಯ ಸುತ್ತಮುತ್ತ ಅಶೋಕ ಮರವನ್ನು ನೆಡುವುದರಿಂದ ಮನುಷ್ಯನ ಸಂಕಷ್ಟಗಳು ದೂರವಾಗುತ್ತದೆ. ಅಶೋಕ ಮರವಿರುವ ಕಡೆ ಯಾವುದೇ ಅಡೆತಡೆಗಳಿಲ್ಲದೇ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ. ಇದು ವಾಸ್ತು ದೋಷವನ್ನು ಹೋಗಲಾಡಿಸುತ್ತದೆ.

ಪೂಜಾ ಕಾರ್ಯಗಳ ವೇಳೆ ಅಶೋಕ ಮರದ ಎಲೆಗಳನ್ನು ದೇವರಿಗೆ ಅರ್ಪಿಸುವುದರಿಂದ ದೇವರು ಸಂತೋಷ ಪಡುತ್ತಾರೆ. ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

ಪತಿ ಪತ್ನಿಯರ ನಡುವೆ ಜಗಳವನ್ನು ಕಡಿಮೆ ಮಾಡಲು ಅಶೋಕ ಮರದ ಎಲೆಗಳನ್ನು ಬಳಸಿ. ಈ ಮರದ 7 ಎಲೆಗಳನ್ನು ದೇವರ ಮುಂದೆ ಇಡಬೇಕು. ಇದರಿಂದ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ದಂಪತಿಗಳ ನಡುವಿನ ಕಲಹ ಕೊನೆಗೊಳ್ಳುತ್ತದೆ.

Peepal tree: ಮನೆಯ ಬಳಿ ಅರಳಿಮರ ಬೆಳೆಸಬಾರದು ಎಂಬುದಕ್ಕೆ ಕಾರಣವೇನು ಗೊತ್ತಾ…?

ವ್ಯಕ್ತಿಯ ಮದುವೆ ವಿಳಂಬವಾಗುತ್ತಿದ್ದರೆ ಅಶೋಕ ಮರದ ಎಲೆಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಇದನ್ನು 42 ದಿನಗಳ ಕಾಲ ನಿರಂತರವಾಗಿ ಮಾಡಿದರೆ ಮದುವೆಯ ಯೋಗ ಕೂಡಿ ಬರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...