Kannada Duniya

ದಾಲ್ ನಿಂದ ಅಡುಗೆ ತಯಾರಿಸುವಾಗ ಅದಕ್ಕೆ ತಣ್ಣೀರನ್ನು ಸೇರಿಸಬೇಡಿ

ಹೆಚ್ಚಿನ ಜನರು ಅಡುಗೆಗೆ ದಾಲ್ ಅನ್ನು ಬಳಸುತ್ತಾರೆ. ಇದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ. ಸಸ್ಯಹಾರಿಗಳು ಬೇಳೆಕಾಳುಗಳನ್ನು ಹೆಚ್ಚು ಬಳಸುತ್ತಾರೆ. ಆದರೆ ಕೆಲವರಿಗೆ ದಾಲ್ ಅನ್ನು ಬೇಯಿಸಿದ ನಂತರ ಅದಕ್ಕೆ ತಣ್ಣೀರನ್ನು ಸುರಿಯುವ ಅಭ್ಯಾಸವಿರುತ್ತದೆ. ಆದರೆ ಹೀಗೆ ಮಾಡಬಾರದಂತೆ.

ದಾಲ್ ತುಂಬಾ ರುಚಿಕರವಾಗಿರುತ್ತದೆ. ಇದರಲ್ಲಿ ಪ್ರೋಟೀನ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಕೊಬ್ಬನ್ನು ಹೊಂದಿರುವುದಿಲ್ಲ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮತ್ತು ಸತುವು ಸಮೃದ್ಧವಾಗಿದೆ. ಆದರೆ ಬೇಳೆಕಾಳುಗಳನ್ನು ಕುಕ್ಕರ್ ನಲ್ಲಿ ಬೇಯಿಸಿದಾಗ ಅದರಲ್ಲಿ ನೀರು ಕಡಿಮೆಯಾಗುತ್ತದೆ. ಹಾಗಾಗಿ ಕೆಲವರು ಅದಕ್ಕೆ ತಣ್ಣೀರನ್ನು ಬೆರೆಸುತ್ತಾರೆ. ಆದರೆ ಹೀಗೆ ಮಾಡಿದರೆ ಅದರ ರುಚಿ ಕೆಡುತ್ತದೆಯಂತೆ.

ಯಾಕೆಂದರೆ ಬೇಯಿಸಿದ ಬೇಳೆಕಾಳುಗಳಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಆಗ ಅದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ನಿಧಾನವಾಗಿ ಬೇಯುವ ಮೂಲಕ ಅದರ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ನೀವು ನೀರು ಸುರಿದರೆ ಈ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಿಂದ ಬೇಳೆ ಸೇರಿಯಾಗಿ ಬೇಯುವುದಿಲ್ಲ. ಆಗ ಅದರ ರುಚಿ ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...