Kannada Duniya

ಗ್ರಹಗಳ ಅಶುಭ ಪರಿಣಾಮವನ್ನು ನಿವಾರಿಸಲು ಈ ಕ್ರಮ ಪಾಲಿಸಿ

ಜಾತಕದಲ್ಲಿ ಗ್ರಹಗಳು ಅಶುಭ ಪರಿಣಾಮವನ್ನು ಬೀರುವುದರಿಂದ ಜೀವನದಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ನೀವು ಯಾವುದೇ ಕೆಲಸ ಮಾಡಲು ಹೋದರು ಅದು ಪೂರ್ತಿಯಾಗುವುದಿಲ್ಲ. ಹಾಗಾಗಿ ಗ್ರಹಗಳ ಅಶುಭ ಪರಿಣಾಮವನ್ನು ನಿವಾರಿಸಲು ಈ ಕ್ರಮ ಪಾಲಿಸಿ.

ಹನುಮಂತನ ಪೂಜೆ ಮಾಡುವುದರಿಂದ ಜಾತಕದಲ್ಲಿರುವ ದೋಷಗಳು ದೂರವಾಗುತ್ತದೆ. ಮತ್ತು ಗ್ರಹಗಳ ಅಶುಭ ಪರಿಣಾಮವನ್ನು ನಿವಾರಿಸಬಹುದು.

ಹಾಗಾಗಿ ಜಾತಕದಲ್ಲಿ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ ಮಂಗಳವಾರದಂದು ಹನುಮಂತನ ಪೂಜೆ ಮಾಡಿ. ಹಾಗೇ ಮಂಗಳವಾರದ ದಿನ ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಿ. ಇದರಿಂದ ಶ್ರೀರಾಮನ ಆಶೀರ್ವಾದದ ಜೊತೆಗೆ ಹನುಮಂತನ ರಕ್ಷಣೆ ಕೂಡ ದೊರೆಯುತ್ತದೆಯಂತೆ.

ಅಲ್ಲದೇ ಜಾತಕದಲ್ಲಿ ಗ್ರಹ ದೋಷವಿರುವವರು ಮಂಗಳವಾರ ಕೂದಲನ್ನು ಕತ್ತರಿಸಬೇಡಿ, ಉಗುರುಗಳನ್ನು ಕತ್ತರಿಸಬೇಡಿ, ಇದರಿಂದ ಹನುಮಂತನು ಕೋಪಗೊಳ್ಳುತ್ತಾನಂತೆ. ಮತ್ತು ಈ ದಿನ ಯಾರಿಗೆ ಸಾಲವನ್ನು ನೀಡಬೇಡಿ. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆಯಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...