ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ನ್ಯಾಯ ದೇವರೆಂದು ಪರಿಗಣಿಸಲಾಗುತ್ತದೆ. ಜನರು ಮಾಡಿರುವಂತಹ ಕರ್ಮಗಳಿಗೆ ಅನುಸಾರವಾಗಿ ಶನಿ ಫಲಗಳನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಶನಿದೋಷದಿಂದ ಬಳಲುತ್ತಿರುವವರು ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಮಂಗಳವಾರದ ದಿನ ಈ ಕೆಲಸ ಮಾಡಿ.
ಶನಿ ದೋಷವನ್ನು ಕಡಿಮೆ ಮಾಡಿಕೊಳ್ಳಲು ಪ್ರತಿ ಮಂಗಳವಾರದಂದು ಹನುಮ ಚಾಲೀಸ್ ಅನ್ನು ಪಠಿಸಿ. ಇದರಿಂದ ನಿಮಗೆ ಹನುಮಂತನ ಕೃಪೆ ದೊರೆಯುತ್ತದೆ. ಇದರಿಂದ ಶನಿ ಕೆಟ್ಟ ದೃಷ್ಟಿ ಕಾಡುವುದಿಲ್ಲ.
ಹಾಗೇ ಮಂಗಳವಾರದಂದು ಶನಿ ಮಂತ್ರವನ್ನು ಜಪಿಸಿ. ಹಾಗೇ ಈ ದಿನ ಕಪ್ಪು ಎಳ್ಳು, ಎಣ್ಣೆ, ಮತ್ತು ಕಬ್ಬಿಣದ ಪಾತ್ರೆಗಳನ್ನು ದಾನ ಮಾಡಿ. ಇದರಿಂದ ಶನಿ ಶಾಂತನಾಗುತ್ತಾನೆ ಮತ್ತು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಹಾಗೇ ಏಳು ಮುಖದ ರುದ್ರಾಕ್ಷಿಯನ್ನು ಧರಿಸಿ. ಇದರಿಂದ ಶನಿದೇವರ ಆಶೀರ್ವಾದ ಸಿಗುತ್ತದೆಯಂತೆ. ಏಳು ಮುಖದ ರುದ್ರಾಕ್ಷಿಯನ್ನು ಮಂಗಳವಾರ ಅಥವಾ ಶನಿವಾರದಂದು ಗಂಗಾಜಲದಲ್ಲಿ ತೊಳೆದು ಧರಿಸಿ.