Kannada Duniya

ವಾರದಲ್ಲಿ ಈ ದಿನಗಳಲ್ಲಿ ನಾವು ಇಂತಹ ಕೆಲಸಗಳನ್ನು ಮಾಡಿದರೆ ದರಿದ್ರ ಆವರಿಸುತ್ತದೆಯಂತೆ…!

ನಮ್ಮ ಹಿರಿಯರು ಕೆಲವೊಂದು ದಿನಗಳಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಇದರಿಂದಾಗಿ ಜೀವನದಲ್ಲಿ ಏಳಿಗೆಯಾಗುವುದಿಲ್ಲ, ಸಮಸ್ಯೆಗಳು ಹೆಚ್ಚು ಕಾಡುತ್ತವೆ ಎನ್ನುತ್ತಾರೆ. ಹಾಗೇ ಜ್ಯೋತಿಷ್ಯಶಾಸ್ತ್ರ ಪ್ರಕಾರ ಕೆಲವು ದಿನಗಳಂದು ಕೆಲವು ಕಾರ್ಯಗಳನ್ನು ನಿಷೇಧಿಸಲಾಗಿದೆ. ಅದು ಯಾವುದೆಂಬುದನ್ನು ತಿಳಿಯೋಣ.

-ವಾರದಲ್ಲಿ ಗುರುವಾರ ಮತ್ತು ಶುಕ್ರವಾರದಂದು ಕೂದಲಿಗೆ ತೈಲವನ್ನು ಹಚ್ಚಬಾರದಂತೆ. ಶುಕ್ರ ಗ್ರಹ ದುರ್ಬಲನಾಗುತ್ತಾನಂತೆ, ಅದರ ಬದಲು ಸೋಮವಾರ ಮತ್ತು ಬುಧವಾರದಂದು ತೈಲವನ್ನು ಹಚ್ಚಿದರೆ ಅದೃಷ್ಟ ಬರುತ್ತದೆಯಂತೆ.

-ಮಂಗಳವಾರ, ಶನಿವಾರ ಮತ್ತು ಗುರುವಾರದಂದು ಉಗುರುಗಳನ್ನು ಕತ್ತರಿಸಬಾರದಂತೆ. ಇದಕ್ಕೆ ಸೋಮವಾರ ಶುಭ ದಿನ ಎನ್ನಲಾಗಿದೆ.

-ಮನೆಯನ್ನು ಗುರುವಾರ ಸ್ವಚ್ಛಗೊಳಿಸಬಾರದಂತೆ. ಇದರಿಂದ ಸಮೃದ್ಧಿ ನಾಶವಾಗುತ್ತದೆಯಂತೆ. ಮನೆ ಸ್ವಚ್ಛಗೊಳಿಸಲು ಭಾನುವಾರ ಮತ್ತು ಶನಿವಾರ ಉತ್ತಮ ದಿನಗಳಂತೆ.

ಚಾಣಕ್ಯ ನೀತಿ: ಯೌವನದಲ್ಲಿ ಇಂತಹ ಅಭ್ಯಾಸದಿಂದ ದೂರವಿರಿ, ಇಲ್ಲವಾದರೆ ಜೀವನ ನಾಶವಾಗುತ್ತದೆಯಂತೆ

-ಮಹಿಳೆಯರು ಸೋಮವಾರ, ಬುಧವಾರ ಮತ್ತು ಗುರುವಾರಗಳಂದು ಕೂದಲನ್ನು ತೊಳೆಯಬಾರದಂತೆ. ಸೋಮವಾರ ತೊಳೆದರೆ ಮಗನಿಗೆ ಸಮಸ್ಯೆಯಾಗುತ್ತದೆಯಂತೆ, ಬುಧವಾರ ತೊಳೆದರೆ ಸಹೋದರಿಗೆ ತೊಂದರೆಯಾಗುತ್ತದೆಯಂತೆ. ಹಾಗೇ ಗುರುವಾರ ಕೂದಲು ತೊಳೆದರೆ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...