ನಮ್ಮ ಹಿರಿಯರು ಕೆಲವೊಂದು ದಿನಗಳಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಇದರಿಂದಾಗಿ ಜೀವನದಲ್ಲಿ ಏಳಿಗೆಯಾಗುವುದಿಲ್ಲ, ಸಮಸ್ಯೆಗಳು ಹೆಚ್ಚು ಕಾಡುತ್ತವೆ ಎನ್ನುತ್ತಾರೆ. ಹಾಗೇ ಜ್ಯೋತಿಷ್ಯಶಾಸ್ತ್ರ ಪ್ರಕಾರ ಕೆಲವು ದಿನಗಳಂದು ಕೆಲವು ಕಾರ್ಯಗಳನ್ನು ನಿಷೇಧಿಸಲಾಗಿದೆ. ಅದು ಯಾವುದೆಂಬುದನ್ನು ತಿಳಿಯೋಣ.
-ವಾರದಲ್ಲಿ ಗುರುವಾರ ಮತ್ತು ಶುಕ್ರವಾರದಂದು ಕೂದಲಿಗೆ ತೈಲವನ್ನು ಹಚ್ಚಬಾರದಂತೆ. ಶುಕ್ರ ಗ್ರಹ ದುರ್ಬಲನಾಗುತ್ತಾನಂತೆ, ಅದರ ಬದಲು ಸೋಮವಾರ ಮತ್ತು ಬುಧವಾರದಂದು ತೈಲವನ್ನು ಹಚ್ಚಿದರೆ ಅದೃಷ್ಟ ಬರುತ್ತದೆಯಂತೆ.
-ಮಂಗಳವಾರ, ಶನಿವಾರ ಮತ್ತು ಗುರುವಾರದಂದು ಉಗುರುಗಳನ್ನು ಕತ್ತರಿಸಬಾರದಂತೆ. ಇದಕ್ಕೆ ಸೋಮವಾರ ಶುಭ ದಿನ ಎನ್ನಲಾಗಿದೆ.
-ಮನೆಯನ್ನು ಗುರುವಾರ ಸ್ವಚ್ಛಗೊಳಿಸಬಾರದಂತೆ. ಇದರಿಂದ ಸಮೃದ್ಧಿ ನಾಶವಾಗುತ್ತದೆಯಂತೆ. ಮನೆ ಸ್ವಚ್ಛಗೊಳಿಸಲು ಭಾನುವಾರ ಮತ್ತು ಶನಿವಾರ ಉತ್ತಮ ದಿನಗಳಂತೆ.
ಚಾಣಕ್ಯ ನೀತಿ: ಯೌವನದಲ್ಲಿ ಇಂತಹ ಅಭ್ಯಾಸದಿಂದ ದೂರವಿರಿ, ಇಲ್ಲವಾದರೆ ಜೀವನ ನಾಶವಾಗುತ್ತದೆಯಂತೆ
-ಮಹಿಳೆಯರು ಸೋಮವಾರ, ಬುಧವಾರ ಮತ್ತು ಗುರುವಾರಗಳಂದು ಕೂದಲನ್ನು ತೊಳೆಯಬಾರದಂತೆ. ಸೋಮವಾರ ತೊಳೆದರೆ ಮಗನಿಗೆ ಸಮಸ್ಯೆಯಾಗುತ್ತದೆಯಂತೆ, ಬುಧವಾರ ತೊಳೆದರೆ ಸಹೋದರಿಗೆ ತೊಂದರೆಯಾಗುತ್ತದೆಯಂತೆ. ಹಾಗೇ ಗುರುವಾರ ಕೂದಲು ತೊಳೆದರೆ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆಯಂತೆ.