Kannada Duniya

ಹಣದ ಕೊರತೆಯನ್ನು ನೀಗಿಸಲು ಈ ಕ್ರಮ ಪಾಲಿಸಿ…!

ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ. ಶಿವನ ಅನುಗ್ರಹ ದೊರೆತರೆ ಸಂಕಷ್ಟಗಳು ದೂರವಾಗುತ್ತದೆಯಂತೆ. ಹಾಗಾಗಿ ಈ ದಿನ ಕೆಲವರು ಶಿವನನ್ನು ಮೆಚ್ಚಿಸಲು ಉಪವಾಸವನ್ನು ಮಾಡುತ್ತಾರೆ. ಹಾಗೇ ಸೋಮವಾರ ಈ ಕ್ರಮಗಳನ್ನು ಪಾಲಿಸುವುದರಿಂದ ಹಣದ ಕೊರತೆ ನಿವಾರಣೆಯಾಗುತ್ತದೆ.

ನಿರಂತರವಾಗಿ ಹಣದ ಕೊರತೆ ಕಾಡುತ್ತಿದ್ದರೆ ಸೋಮವಾರದಂದು ಶಿವಲಿಂಗಕ್ಕೆ ಹಾಲು ಮಿಶ್ರಿತ ನೀರನ್ನು ಅರ್ಪಿಸಿ. ರುದ್ರಾಕ್ಷಿ ಮಾಲೆಯನ್ನು ಹಿಡಿದು 108 ಬಾರಿ ಶಿವ ನಾಮ ಸ್ಮರಣೆ ಮಾಡಿ. ಹುಣ್ಣಿಮೆಯಂದು ಚಂದ್ರನಿಗೆ ಹಾಲನ್ನು ಅರ್ಪಿಸಿ.

ಪಿತ್ರಾದೋಷವನ್ನು ನಿವಾರಿಸಲು ಸೋಮವಾರದಂದು ಸಂಜೆಯ ವೇಳೆ ಕಪ್ಪು ಎಳ್ಳು ಮತ್ತು ಹಸಿ ಅಕ್ಕಿಯನ್ನು ಬೆರೆಸಿ ದಾನ ಮಾಡಬೇಕು. ಇದರಿಂದ ಸಮಸ್ಯೆಗಳು ದೂರವಾಗುತ್ತದೆ.

ಅಂಗೈಯಲ್ಲಿ ‘ಈ ಗುರುತು’ ಇದ್ದರೆ ಏನರ್ಥ ಗೊತ್ತಾ?

ಕಣ್ಣಿನ ದೋಷವನ್ನು ನಿವಾರಿಸಲು ಸೋಮವಾರ ಒಂದು ಲೋಟ ಹಾಲನ್ನು ತಲೆಯ ಬಳಿ ಇಟ್ಟುಕೊಂಡು ಮರುದಿನ ಬೆಳಿಗ್ಗೆ ಸ್ನಾನ ಮಾಡಿ ಎಕ್ಕೆ ಮರದ ಬುಡಕ್ಕೆ ಹಾಕಿ. ಹಾಗೇ ವೈವಾಹಿಕ ಜೀವನದಲ್ಲಿ ಸಮಸ್ಯೆ ಇದ್ದರೆ ಸೋಮವಾರ ಶಿವನ ದೇವಸ್ಥಾನದಲ್ಲಿ ಗೌರಿ-ಶಂಕರ ರುದ್ರಾಕ್ಷಿಯನ್ನು ಅರ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...