Kannada Duniya

ಈ ದೇವರಿಗೆ ಈ ಹೂಗಳನ್ನು ಅಪ್ಪಿತಪ್ಪಿಯೂ ಅರ್ಪಿಸಬೇಡಿ

ದೇವರ ಪೂಜೆ ಮಾಡಲು ಹೂಗಳು ಅಗತ್ಯವಾಗಿ ಬೇಕು. ದೇವರ ಫೋಟೊವನ್ನು ಹೂವಿನಿಂದ ಶೃಂಗರಿಸಿದರೆ ಮಾತ್ರ ಪೂಜೆ ಮಾಡಿದ ತೃಪ್ತಿ ಸಿಗುತ್ತದೆ. ಆದರೆ ಎಲ್ಲಾ ದೇವರಿಗೂ ಒಂದೇ ತರಹದ ಹೂವನ್ನು ಅರ್ಪಿಸುವ ಹಾಗಿಲ್ಲ. ಇದರಿಂದ ನೀವು ದೇವರ ಕೋಪಕ್ಕೆ ಗುರಿಯಾಗುತ್ತೀರಿ. ಹಾಗಾಗಿ ಯಾವ ದೇವರಿಗೆ ಯಾವ ಹೂವನ್ನು ಅರ್ಪಿಸಬೇಕು ಎಂಬುದನ್ನು ತಿಳಿಯಿರಿ.

ಪಾರ್ವತಿ ದೇವಿಗೆ ನೆಲ್ಲಿಕಾಯಿ ಹೂ ಮತ್ತು ಮಂದಾರ ಹೂಗಳನ್ನು ಅರ್ಪಿಸಬೇಡಿ. ಇದರಿಂದ ಪಾರ್ವತಿ ದೇವಿ ಕೋಪಗೊಳ್ಳುತ್ತಾಳಂತೆ. ಅದರ ಬದಲಾಗಿ ಪಾರ್ವತಿಗೆ ಬಿಲ್ವದ ಪತ್ರೆ, ಬಿಳಿ ಕಮಲ, ಚಂಪಾ ಹೂಗಳನ್ನು ಅರ್ಪಿಸಿ.

ಬಿಲ್ವಪತ್ರೆಯನ್ನು ಶಿವನ ಆರಾಧನೆಗೆ ಬಳಸುತ್ತೇವೆ. ಆದರೆ ಸೂರ್ಯ ದೇವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಡಿ. ಇದರಿಂದ ಸೂರ್ಯ ಕೋಪಗೊಳ್ಳುತ್ತಾನಂತೆ. ಸೂರ್ಯದೇವರ ಪೂಜೆಗೆ ಕಮಲ, ಚಂಪಾ, ಕನೇರ್ ಹೂಗಳನ್ನು ಅರ್ಪಿಸಿ.

ಹಾಗೇ ದುರ್ಗಾದೇವಿಗೆ ಗಾಢವಾದ ವಾಸನೆ ಇರುವಂತಹ ಹೂಗಳನ್ನು ಅರ್ಪಿಸಬೇಡಿ. ಅದರ ಬದಲಾಗಿ ದಾಸವಾಳ ಹೂಗಳನ್ನು ಅರ್ಪಿಸಿದರೆ ದೇವಿ ಸಂತೋಷಗೊಳ್ಳುತ್ತಾಳಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...