Kannada Duniya

ಮರೆತರೂ ಈ ಕೆಲಸಗಳನ್ನು ಮಾಡಬೇಡಿ, ಶನಿದೇವ ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ

ನವಗ್ರಹಗಳಲ್ಲಿ ಶನಿದೇವನಿಗೆ ಮಹತ್ವದ ಸ್ಥಾನವಿದೆ. ಶನಿದೇವ ಕರ್ಮಕ್ಕೆ ಫಲ ನೀಡುವವನು ಮತ್ತು ನ್ಯಾಯದ ದೇವರೆಂದು ಕರೆಯುತ್ತಾರೆ. ಹಾಗಾಗಿ ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದರೆ ನಿಮಗೆ ಶನಿದೇವನ ಅನುಗ್ರಹ ದೊರೆಯುತ್ತದೆ. ಒಂದು ವೇಳೆ ತಪ್ಪು ಕೆಲಸ ಮಾಡಿದರೆ ಶನಿಕೋಪಕ್ಕೆ ಒಳಗಾಗುತ್ತೀರಿ. ಹಾಗಾಗಿ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ.

ಶನಿವಾರದಂದು ಮಧ್ಯವನ್ನು ಸೇವಿಸಬೇಡಿ. ಇದರಿಂದ ಶನಿ ಕೋಪಗೊಳ್ಳುತ್ತಾನೆ ಮತ್ತು ಜೀವನದಲ್ಲಿ ಸಮಸ್ಯೆಗಳು ಕಾಡುತ್ತವೆ.

ಶನಿವಾರದಂದು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಬೇಡಿ. ಅಗತ್ಯವಿದ್ದರೆ ಶುಂಠಿ ಸೇವಿಸಿ ನಂತರ ಪ್ರಯಾಣಿಸಿ. ಹಾಗೇ 5 ಹೆಜ್ಜೆ ಹಿಮ್ಮುಖವಾಗಿ ನಡೆದು ನಂತರ ಪ್ರಯಾಣ ಬೆಳೆಸಿ.

ಶನಿವಾರದಂದು ಎಣ್ಣೆ, ಕಟ್ಟಿಗೆ, ಕಲ್ಲಿದ್ದಲು, ಉಪ್ಪು, ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ. ಇದರಿಂದ ನಿಮಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.

ಶನಿವಾರದಂದು ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ. ಇದರಿಂದ ನೀವು ಶನಿಯ ಕೋಪಕ್ಕೆ ಗುರಿಯಾಗಿ ಜೀವನದಲ್ಲಿ ಏಳಿಗೆ ಕಾಣುವುದಿಲ್ಲ.

ಶನಿವಾರದಂದು ಯಾವುದೇ ಕಾರಣಕ್ಕೂ ಸುಳ್ಳನ್ನು ಹೇಳಬೇಡಿ. ಇದರಿಂದ ನೀವು ಜೀವನ ಪರ್ಯಂತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಶನಿವಾರದಂದು ಮಹಿಳೆ , ಮಕ್ಕಳು ಮತ್ತು ನಿಗರ್ತಿಕರನ್ನು ಅವಮಾನಿಸಬೇಡಿ. ಇದರಿಂದ ಶನಿದೋಷ ನಿಮ್ಮ ಬೆನ್ನು ಹತ್ತುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...