Kannada Duniya

ಜಾತಕದಲ್ಲಿ ಗ್ರಹ ದೋಷವಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ…!

ಹಾಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ದೋಷವನ್ನು ನಿವಾರಿಸಲು ಅನೇಕ ಪರಿಹಾರಗಳನ್ನು ತಿಳಿಸಲಾಗಿದೆ. ಅದರಂತೆ ಕೆಲವು ಗಿಡಮೂಲಿಕೆಗಳ ಮೂಲಕ ಕೂಡ ಗ್ರಹ ದೋಷವನ್ನು ನಿವಾರಿಸಬಹುದಂತೆ.

ಜಾತಕದಲ್ಲಿ ಸೂರ್ಯ ಗ್ರಹದ ದೋಷವನ್ನು ನಿವಾರಿಸಲು ಬಿಲ್ವ ಪತ್ರೆ ಮರದ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಿದರೆ ಸೂರ್ಯ ಪ್ರಸನ್ನನಾಗುತ್ತಾನೆ.

ಚಂದ್ರ ದೋಷವನ್ನು ನಿವಾರಿಸಲು ಖಿರ್ಣಿ ಬೇರನ್ನು ಧರಿಸಿ. ಇದನ್ನು ಸೋಮವಾರದಂದು ಧರಿಸಿದರೆ ಉತ್ತಮ.

ಬುಧ ಗ್ರಹದ ದೋಷವನ್ನು ಕಡಿಮೆಮಾಡಲು ವಿಧಾರದ ಮೂಲವನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ಅದನ್ನು ಬುಧವಾರದಂದು ಧರಿಸಿ.

ಗುರು ಗ್ರಹ ದೋಷವನ್ನು ನಿವಾರಿಸಲು ಬಾಳೆಮರದ ಬೇರನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಬಳಸಿದರೆ ಗುರುವು ಬಲಗೊಳ್ಳುತ್ತಾನೆ.

ಈ ದಿನಾಂಕಗಳಲ್ಲಿ ಜನಿಸಿದ ಜನರು ಹಣವನ್ನು ಉಳಿಸುವಲ್ಲಿ ಪರಿಣಿತರು…!

ಶುಕ್ರ ಗ್ರಹದ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಲು ಸಿಕಾಮೋರ್ ಮರದ ಬೇರನ್ನು ಧರಿಸಿ. ಇದು ವಜ್ರದಂತೆ ಕೆಲಸಮಾಡುತ್ತದೆ.

ಶನಿ ಗ್ರಹದ ದೋಷವನ್ನು ನಿವಾರಿಸಲು ಶಮಿ ಮರದ ಬೇರನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ ಶನಿವಾರದಂದು ಧರಿಸಿ.

ರಾಹು ದೋಷವನ್ನು ನಿವಾರಿಸಲು ಬಿಳಿ ಚಂದನವನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ ಬುಧವಾರದಂದು ಧರಿಸಿ.

ಹಾಗೇ ಕೇತುವಿನ ಅಶುಭ ಪರಿಣಾಮವನ್ನು ಕಡಿಮೆ ಮಾಡಲು ಅಶ್ವಗಂಧದ ಬೇರನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ ಗುರುವಾರದಂದು ಧರಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...