ಪ್ರತಿಯೊಬ್ಬರು ದೇವರ ಮುಂದೆ ಬೆಳಿಗ್ಗೆ ಮತ್ತು ಸಂಜೆಯ ವೇಳೆ ದೀಪವನ್ನು ಹಚ್ಚುವ ಮೂಲಕ ಪೂಜೆ ಮಾಡುತ್ತಾರೆ. ಹಾಗೇ ಈ ವೇಳೆ ಕೆಲವರು ಉದ್ದವಾದ ಬತ್ತಿಯನ್ನು ಇಟ್ಟರೆ ಕೆಲವರು ಸಣ್ಣದಾಗಿ ಬತ್ತಿಯನ್ನು ಇಟ್ಟು ದೀಪವನ್ನು ಬೆಳಗುತ್ತಾರೆ. ಆದರೆ ಈ ದೇವರ ಮುಂದೆ ಉದ್ದವಾದ ಬತ್ತಿ ಇಟ್ಟು ದೀಪ ಹಚ್ಚಿದರೆ ಆರ್ಥಿಕ ನಷ್ಟವಾಗುತ್ತದೆಯಂತೆ.
ಶಿವ ಪುರಾಣದ ಪ್ರಕಾರ ಉದ್ದನೆಯ ಬತ್ತಿಯಿಟ್ಟು ದೀಪ ಹಚ್ಚುವುದರಿಂದ ದಿನದಿಂದ ದಿನಕ್ಕೆ ಸಂಪತ್ತು ಹೆಚ್ಚಾಗುತ್ತದೆಯಂತೆ, ಕುಟುಂಬದವರು ನಿರಂತರವಾಗಿ ಬೆಳವಣಿಗೆ ಹೊಂದುತ್ತಾರಂತೆ. ಆದರೆ ಬ್ರಹ್ಮ, ವಿಷ್ಣು, ಈಶ್ವರ ಅಥವಾ ಇತರ ದೇವರ ಮುಂದೆ ಉದ್ದನೆಯ ಬತ್ತಿಯಿಟ್ಟು ದೀಪವನ್ನು ಹಚ್ಚಬಾರದಂತೆ.
ಆದರೆ ಲಕ್ಷ್ಮಿ, ದುರ್ಗಾ, ಸರಸ್ವತಿ, ಗೌರಿ, ಮಹಾ ಕಾಳಿ, ಹಾಗೂ ಇತರ ದೇವಿಯರ ಮುಂದೆ ಉದ್ದನೆಯ ದೀಪವನ್ನ ಹಚ್ಚಿದರೆ ಒಳ್ಳೆಯದಂತೆ. ಹಾಗೇ ನಿಮ್ಮ ಪೂರ್ವಜರ ಫೋಟೊಗಳಿಗೆ ದೀಪವನ್ನು ಹಚ್ಚುವಾಗ ಉದ್ದನೇಯ ಬತ್ತಿಯಿಟ್ಟರೆ ಒಳ್ಳೆಯದಂತೆ. ಹಾಗಾಗಿ ಅಮಾವಾಸ್ಯೆ, ಪಿತೃಪಕ್ಷ ಅಥವಾ ಪೂರ್ವಜರಿಗೆ ಸಂಬಂಧಪಟ್ಟ ಕಾರ್ಯ ಮಾಡುವಾಗ ಉದ್ದನೇಯ ದೀಪ ಹಚ್ಚಿ