ಹಿಂದೂ ಧರ್ಮದ ಪ್ರಕಾರ ಬುಧವಾರ ಗಣೇಶನನ್ನು ಪೂಜಿಸಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಗಣೇಶನ ಹೆಸರಿನಿಂದ ಆರಂಭಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಈತ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ. ಹಾಗಾಗಿ ಬುಧವಾರ ಈ ಮಂತ್ರದಿಂದ ಅವನನ್ನು ಜಪಿಸಿದರೆ ನಿಮ್ಮ ಜೀವನದಲ್ಲಿ ಎದುರಾದ ಕಷ್ಟಗಳು ನಿವಾರಣೆಯಾಗುತ್ತದೆಯಂತೆ.
‘ಓಂ ಶ್ರೀ ಗಂಗಾ ಸೌಭಾಗ್ಯ ಗಣಪತಯೇ ವರ್ ವರದ ಸರ್ವಜನಂ ಮೇ ವಿಸ್ಮಯನ ಸ್ವಾಹಾ’ ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯು ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಹೊಂದುತ್ತಾನೆ ಮತ್ತು ಉದ್ಯೋಗವನ್ನು ಪಡೆಯುತ್ತಾನೆ. ಹಾಗೇ ಜೀವನದಲ್ಲಿರುವ ಒತ್ತಡ ನಿವಾರಣೆಯಾಗಿ ಖ್ಯಾತಿ ಲಭಿಸುತ್ತದೆ.
‘ಓಂ ಹಸ್ತಿ ಪಿಶಾಚಿ ಲಿಖೇ ಸ್ವಾಹಾ’ ಬುಧವಾರ ಗಣೇಶನ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸೋಮಾರಿತನ, ಹತಾಶೆ, ಭಿನ್ನಾಭಿಪ್ರಾಯ ಮತ್ತು ದುಃಖದಂತಹ ನಕರಾತ್ಮಕ ಭಾವನೆಗಳು ದೂರವಾಗುತ್ತವೆ.
‘ಓಂ ಗಣ ಗಣಪತಯೇ ನಮಃ’ಬುಧವಾರ ಗಣೇಶನ ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತದೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಸಿಗುತ್ತದೆ.
ಬುಧವಾರ ಗಣೇಶನ ಪೂಜೆ ಈ ರೀತಿ ಮಾಡಬೇಕಂತೆ
‘ಓಂ ವಕ್ರತುಂಡಾಯ ಹೂಂ’ ಬುಧವಾರ ಗಣೇಶನ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಬರುವ ಎಲ್ಲಾ ರೀತಿಯ ಅಡೆತಡೆಗಳನ್ನು ಹೋಗಲಾಡಿಸಬಹುದು ಮತ್ತು ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.
Chant these Lord Ganesha mantras to get rid of all troubles