Kannada Duniya

ಬುಧವಾರ ಗಣೇಶನ ಪೂಜೆ ಈ ರೀತಿ ಮಾಡಬೇಕಂತೆ….!

 ಬುಧವಾರ ಗಣೇಶನಿಗೆ ಅರ್ಪಿಸಲಾಗಿದೆ. ಮತ್ತು ಯಾವುದೇ ಶುಭ ಕೆಲಸವನ್ನು ಮಾಡುವು ಮುನ್ನ ಗಣೇಶನನ್ನು ಪೂಜಿಸಲಾಗುತ್ತದೆ. ಹಾಗಾಗಿ ಬುಧವಾರ ಗಣೇಶನನ್ನು ಪೂಜಿಸುವಾಗ ಈ ಕ್ರಮಗಳನ್ನು ಕೈಗೊಂಡರೆ ನಿಮಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ.

-ಗಣೇಶನಿಗೆ ಕೆಂಪು ಬಣ್ಣ ತುಂಬಾ ಇಷ್ಟ. ಬುಧವಾರ ಗಣೇಶನಿಗೆ ಕೆಂಪು ಸಿಂಧೂರ ತಿಲಕವನ್ನು ಸಲ್ಲಿಸಬೇಕು. ಇದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ.

-ಗಣೇಶನಿಗೆ ಗರಿಕೆ ಹುಲ್ಲು ತುಂಬಾ ಪ್ರಿಯವಾಗಿದೆ. ಹಾಗಾಗಿ ಬುಧವಾರದಂದು ಗಣೇಶನ ಪೂಜೆಗೆ ಗರಿಕೆ ಹುಲ್ಲನ್ನು ಅರ್ಪಿಸಬೇಕು. ಇದು ಮನೆಯಲ್ಲಿ ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ.

-ಪೂಜೆಯಲ್ಲಿ ಅಕ್ಕಿಯನ್ನು ಬಳಸುವುದು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಒಣ ಅಕ್ಕಿ ಗಣೇಶನಿಗೆ ಅರ್ಪಿಸಬಾರದು. ಬದಲಾಗಿ ಅಕ್ಕಿಯನ್ನು ಒದ್ದೆಯಾಗಿಸಿ ಅರ್ಪಿಸಬೇಕು. ಇದರಿಂದ ಗಣೇಶ ಪ್ರಸನ್ನಗೊಳ್ಳುತ್ತಾನೆ.

ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಗಣಪತಿಯ ಪೂಜೆಯ ವೇಳೆ ಈ ನಿಯಮ ಪಾಲಿಸಿ

-ತುಪ್ಪ ಮತ್ತು ಬೆಲ್ಲವನ್ನು ಗಣೇಶನಿಗೆ ಅರ್ಪಿಸಬೇಕು. ಇದು ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯಗಳನ್ನು ತೆಗೆದುಹಾಕುತ್ತದೆ. ಜೀವನದಲ್ಲಿ ಸಂತೋಷ ಸಿಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...