ಜೀವನದಲ್ಲಿ ಪ್ರಗತಿ ಹೊಂದಲು ಕೆಲವೊಂದು ವಾಸ್ತುಕ್ರಮಗಳನ್ನು ಪಾಲಿಸಬೇಕು. ಇಲ್ಲವಾದರೆ ಸಮಸ್ಯೆಗಳು ಕಾಡುತ್ತದೆ. ವಾಸ್ತು ಪ್ರಕಾರ ಬೆಳಿಗ್ಗೆ ಮನೆಯಲ್ಲಿ ಮಾಡುವಂತಹ ಕೆಲವು ಕೆಲಸಗಳು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆಯಂತೆ. ಹಾಗಾಗಿ ಸ್ನಾನದ ನಂತರ ಈ ಕೆಲಸಗಳನ್ನು ಮಾಡಿದರೆ ಜೀವನದಲ್ಲಿ ಆರ್ಥಿಕ ಪ್ರಗತಿ ಕಾಣುತ್ತೀರಿ.
ಹಿಂದೂಧರ್ಮದ ಪ್ರಕಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ ಮೊದಲು ದೇವರನ್ನು ಪೂಜಿಸಬೇಕಂತೆ. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೀವನದಲ್ಲಿ ಏಳಿಗೆ ಕಾಣುತ್ತೀರಿ.
ಹಾಗೇ ಬೆಳಿಗ್ಗೆ ಸ್ನಾನ ಮಾಡಿದ ನಂತರ ಗಂಗಾಜಲವನ್ನು ಮನೆಯ ಮೂಲೆ ಮುಲೆಗೂ ಸಿಂಪಡಿಸಬೇಕಂತೆ. ಹಾಗೇ ಮನೆಯ ಮುಖ್ಯದ್ವಾರಕ್ಕೆ ಸಿಂಪಡಿಬೇಕಂತೆ. ಮತ್ತು ಅದನ್ನು ನೀವು ಕೂಡ ಸೇವಿಸಬೇಕಂತೆ. ಇದು ಮಂಗಳಕರವನ್ನುಂಟುಮಾಡುತ್ತದೆಯಂತೆ.
ಹಾಗೇ ಸ್ನಾನದ ಮಾಡಿದ ನಂತರ ಮನೆಯ ಮುಖ್ಯದ್ವಾರಕ್ಕೆ ಅರಿಶಿನವನ್ನು ಹಚ್ಚಿ ಪೂಜೆ ಮಾಡಬೇಕಂತೆ. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಬರುವುದಿಲ್ಲವಂತೆ.
ಹಾಗೇ ಸ್ನಾನವಾದ ನಂತರ ಗಂಗಾಜಲವಿಲ್ಲದಿದ್ದರೆ ಉಪ್ಪು ನೀರನ್ನು ಮನೆಯೊಳಗೆ ಸಿಂಪಡಿಸಬೇಕಂತೆ. ಇದರಿಂದ ನಕರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆಯಂತೆ.