ಹಿಂದೂಧರ್ಮದಲ್ಲಿ ವಿಶೇಷ ದಿನಗಳಂದು ಮನೆಗೆ ಮಾವಿನ ಎಲೆಗಳ ತೋರಣವನ್ನು ಕಟ್ಟುತ್ತಾರೆ. ಯಾಕೆಂದರೆ ಮಾವಿನ ಮರಕ್ಕೆ ಹಿಂದೂಧರ್ಮದಲ್ಲಿ ವಿಶೇಷ ಸ್ಥಾನವಿದೆ. ಹಾಗಾಗಿ ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಮಾವಿನ ಎಲೆ ಬಳಸಿ ನಿವಾರಿಸಿಕೊಳ್ಳಿ.
ನಿಮಗೆ ಆರ್ಥಿಕ ಬಿಕ್ಕಟ್ಟು ಇದ್ದರೆ 11 ಮಾವಿನ ಚಿಕ್ಕ ಕೊಂಬೆಗಳನ್ನು ಹತ್ತಿಯಲ್ಲಿ ಸುತ್ತಿ ಶಿವ ದೇವಾಲಯದಲ್ಲಿ ನಡೆಯುವ ಹವನದಲ್ಲಿಹಾಕಬೇಕು.
ಮನೆಯ ಮುಖ್ಯದ್ವಾರಕ್ಕೆ ಮಾವಿನ ಎಲೆಗಳ ತೋರಣ ಕಟ್ಟಿದರೆ ನಿಮ್ಮ ಮನೆ ಮೇಲೆ ಯಾವುದೇ ಕೆಟ್ಟ ಶಕ್ತಿಯ ಕಣ್ಣು ಬೀಳುವುದಿಲ್ಲ.
ಪೂಜಾ ಸಮಯದಲ್ಲಿ ಮನೆಯಲ್ಲಿ ಮಾವಿನ ಎಲೆಗಳಿಂದ ನೀರನ್ನು ಸಿಂಪಡಿಸುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆಯಂತೆ.
ನೀವು ವೃತ್ತಿಯಲ್ಲಿ ಯಶಸ್ಸನ್ನು ಕಾಣಲು ಮಾವಿನ ಬೇರುಗಳನ್ನು ನೀರಿನಲ್ಲಿ ಅದ್ದಿ ಮಾವಿನ ಮರಕ್ಕೆ ಅರ್ಪಿಸಿ.