Kannada Duniya

ಈ ವಸ್ತುಗಳನ್ನು ಸೂರ್ಯಾಸ್ತದ ನಂತರ ದಾನ ಮಾಡಿದರೆ ಆರ್ಥಿಕ ಸಮಸ್ಯೆ ಕಾಡುತ್ತದೆಯಂತೆ…!

ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಕೆಲಸವನ್ನು ಮಾಡಲು ಸಮಯ ಬಹಳ ಮುಖ್ಯ. ಇಲ್ಲವಾದರೆ ಇದರಿಂದ ನಕರಾತ್ಮಕ ಪರಿಣಾಮ ಬೀರುತ್ತದೆ. ದಾನ ಮಾಡುವುದು ಉತ್ತಮ ಕಾರ್ಯ ನಿಜ. ಆದರೆ ಅದನ್ನು ಸರಿಯಾದ ಸಮಯದಲ್ಲಿ ಮಾಡಬೇಕು. ಇಲ್ಲವಾದರೆ ಇದರಿಂದ ಆರ್ಥಿಕ ಸಮಸ್ಯೆ ಕಾಡುತ್ತದೆ. ಹಾಗಾಗಿ ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡಬೇಡಿ.

ಹಾಲು : ವಾಸ್ತುಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ನಂತರ ಹಾಲನ್ನು ದಾನ ಮಾಡಬಾರದು. ಹಾಲು ಲಕ್ಷ್ಮಿ ದೇವಿಗೆ ಪ್ರಿಯವಾದುದು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತದೆಯಂತೆ.

ಹಣ : ಸೂರ್ಯಾಸ್ತದ ನಂತರ ಹಣದ ವಹಿವಾಟುಗಳನ್ನು ಮಾಡಬಾರದು. ಇದರಿಂದ ಮನೆಯಿಂದ ಲಕ್ಷ್ಮಿ ಹೊರಟುಹೋಗುತ್ತಾಳೆ, ಆರ್ಥಿಕ ಸಮಸ್ಯೆ ಕಾಡುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ : ಇವುಗಳನ್ನು ಸೂರ್ಯಾಸ್ತದ ಬಳಿಕ ದಾನ ಮಾಡಬಾರದು. ಇವು ಕೇತುವಿಗೆ ಸಂಬಂಧಿಸಿವೆ. ಇದರಿಂದ ಮನೆಯಲ್ಲಿ ನಕರಾತ್ಮಕ ಶಕ್ತಿ ನೆಲೆಸುತ್ತದೆ.

ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಇದನ್ನು ಇರಿಸಿದರೆ ಒಳ್ಳೆಯದಂತೆ…..!

ಅರಿಶಿನ : ಅರಿಶಿನ ಗುರುವಿಗೆ ಸಂಬಂಧಿಸಿದ್ದು, ಸೂರ್ಯಸ್ತದ ಬಳಿಕ ಅರಿಶಿನ ದಾನ ಮಾಡಿದರೆ ಗುರುವಿನ ಸ್ಥಾನ ದುರ್ಬಲವಾಗುತ್ತದೆ. ಇದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

ಮೊಸರು : ಸೂರ್ಯಾಸ್ತದ ಬಳಿಕ ಮೊಸರು ದಾನ ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಹಣದ ಸಮಸ್ಯೆ ಉಂಟಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...