ಹಿಂದೂಧರ್ಮದಲ್ಲಿ ಹಸುವನ್ನು ದೇವರೆಂದು ಪೂಜಿಸಲಾಗುತ್ತದೆ. ಹಸುವಿನಲ್ಲಿ ಮುಕ್ಕೋಟಿ ದೇವರು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಗೋವಿನ ಪೂಜೆ ಮತ್ತು ಅದರ ಸೇವೆಗೆ ಹಿಂದೂಧರ್ಮದಲ್ಲಿ ವಿಶೇಷ ಮಹತ್ವವಿದೆ. ಅಲ್ಲದೇ ಹಸುವಿಗೆ ಆಹಾರವನ್ನು ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ. ಆದಕಾರಣ ಹಸುವಿಗೆ ತಪ್ಪದೇ ಈ ವಸ್ತುವನ್ನು ತಿನ್ನಿಸಿ.
ಹಸುವಿಗೆ ಬೆಲ್ಲವನ್ನು ತಿನ್ನಿಸುವುದು ಮಂಗಳಕರವಂತೆ. ಅದು ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ. ಹಸುವಿಗೆ ಪ್ರತಿನಿತ್ಯ ಬೆಲ್ಲವನ್ನು ತಿನ್ನಿಸುವುದರಿಂದ ಜಾತಕದಲ್ಲಿ ಮಂಗಳದೋಷ ನಿವಾರಣೆಯಾಗುತ್ತದೆಯಂತೆ.
ಹಾಗೇ ಶನಿದೋಷ ನಿವಾರಣೆಯಾಗಲು ಹಸುವಿಗೆ ಬೆಲ್ಲ ತಿನ್ನಿಸುವುದು ಉತ್ತಮವಂತೆ. ಅದರಲ್ಲೂ ಕಪ್ಪು ಹಸುವಿನ ಸೇವೆ ಮಾಡಿದರೆ ಶನಿ ಸಂತೋಷಗೊಳ್ಳುತ್ತಾನಂತೆ.
ಹಾಗೇ ಹಸುವಿಗೆ ಬೆಲ್ಲವನ್ನು ತಿನ್ನಿಸುವುದರಿಂದ ರಾಹು ಕೇತು ಪ್ರಸನ್ನರಾಗುತ್ತಾರಂತೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತದೆಯಂತೆ.
ಹಸುವಿಗೆ ಬೆಲ್ಲವನ್ನು ತಿನ್ನಿಸುವುದರಿಂದ ಮದುವೆಯ ಅಡೆತಡೆಗಳು ನಿವಾರಣೆಯಾಗುತ್ತದೆಯಂತೆ ಮತ್ತು ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ಲಭಿಸುತ್ತದೆಯಂತೆ.