ಎಲ್ಲರಿಗೂ ಹಣ ಬಹಳ ಮುಖ್ಯ. ಹಣವಿದ್ದರೆ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಅನೇಕರು ಹಣಕಾಸಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಹಾಗಾಗಿ ಅಂತವರು ಈ ಹಣಕಾಸಿನ ಸಮಸ್ಯೆಯನ್ನು ನಿವಾರಿಸಲು ಹಣವಿಡುವ ಸ್ಥಳದಲ್ಲಿ ಈ ವಸ್ತುಗಳನ್ನು ಇಡಿ.
ಹೆಚ್ಚಿನವರು ಹಣವಿಡಲು ಬೀರುಗಳನ್ನು ಬಳಸುತ್ತಾರೆ. ಹಾಗಾಗಿ ಬೀರುವಿನಲ್ಲಿ ಬಿಳಿ ಬಟ್ಟೆಯನ್ನು ಇಟ್ಟು ಅದಕ್ಕೆ ಅತ್ತರು ಎಂಬ ಸುಗಂಧ ದ್ರವ್ಯವನ್ನು ಹಾಕಿ. ಯಾಕೆಂದರೆ ಸುಗಂಧ ದ್ರವ್ಯ ಶುಕ್ರನಿಗೆ ಬಹಳ ಪ್ರಿಯ. ಹಾಗಾಗಿ ಶುಕ್ರನ ಅನುಗ್ರಹ ದೊರೆತರೆ ನಿಮಗೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆ.
ಈ ಒಂದು ವಸ್ತುವನ್ನು ಮನೆಯ ಮುಖ್ಯದ್ವಾರದಲ್ಲಿ ನೇತುಹಾಕಿದರೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆಯಂತೆ….!
ಹಾಗೇ ಹಣವಿಡುವ ಸ್ಥಳದಲ್ಲಿ ಪಚ್ಚೆ ಕರ್ಪೂರದ ಜೊತೆಗೆ ಲಾವಂಚದ ಬೇರನ್ನು ಇಡಿ. ಇದರಿಂದ ನಿಮಗೆ ಹಣದ ಕೊರತೆ ಕಾಡಲ್ಲ. ಹಾಗೇ ಬೀರುವಿನ ಮೇಲೆ ಲಕ್ಷ್ಮಿದೇವಿಯ ಫೋಟೊವನ್ನು ಅಂಟಿಸಿ, ಸ್ವಸ್ತಿಕ್ ಚಿಹ್ನೆಯನ್ನು ಅರಿಶಿನದಿಂದ ಬಿಡಿಸಿ.