Kannada Duniya

ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಈ ಪರಿಹಾರ ಮಾಡಿ….!

ವ್ಯಾಪಾರ, ವ್ಯವಹಾರ ನಡೆಸುವವರಿಗೆ ಆಗಾಗ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಕೆಲವರಿಗೆ ವ್ಯಾಪಾರದಲ್ಲಿ ತುಂಬಾ ಲಾಭ ಸಿಗುತ್ತದೆ. ಕೆಲವರಿಗೆ ಎಷ್ಟೇ ಕಷ್ಟಪಟ್ಟರೂ ಪ್ರಗತಿ ಕಾಣಲು ಸಾಧ್ಯವಾಗುವುದಿಲ್ಲ. ಅಂತವರು ವ್ಯವಹಾರದಲ್ಲಿ ಪ್ರಗತಿ ಕಾಣಲು ಈ ಪರಿಹಾರ ಮಾಡಿ.

-ಪ್ರತಿ ಮಂಗಳವಾರದಂದು 11 ಅರಳೀಮರದ ಎಲೆಗಳನ್ನು ತೆಗೆದುಕೊಂಡು ಬಂದು ಸ್ವಚ್ಛಗೊಳಿಸಿ ಪ್ರತಿ ಎಲೆಯ ಮೇಲೆ ಕೆಂಪು ಚಂದನದಿಂದ ರಾಮ ರಾಮ ಎಂದು ಬರೆಯಿರಿ. ಬಳಿಕ ಈ ಎಲೆಗಳನ್ನು ಹನುಮಂತನ ದೇವಸ್ಥಾನಕ್ಕೆ ಅರ್ಪಿಸಿ. ಇದರಿಂದ ವ್ಯವಹಾರದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.

-ವ್ಯವಹಾರದ ವಿಚಾರಕ್ಕೆ ಹೊರಗಡೆ ಹೋಗುವಾಗ 11 ರೂ ನಾಣ್ಯವನ್ನು ರಹಸ್ಯವಾದ ಸ್ಥಳದಲ್ಲಿ ಇರಿಸಿ. ಪ್ರಯಾಣ ಮಾಡಿ ಮನೆಗೆ ಬಂದ ಬಳಿಕ ಅದನ್ನು ಸಾಧು, ಪಂಡಿತರಿಗೆ ದಾನ ಮಾಡಿ. ಇದರಿಂದ ನಿಮ್ಮ ವ್ಯವಹಾರದಲ್ಲಿ ಏಳಿಗೆ ಕಾಣುತ್ತೀರಿ.

ಸೂರ್ಯಾಸ್ತದ ನಂತರ ಈ ಕೆಲಸವನ್ನು ಮಾಡಿದರೆ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆಯಂತೆ….!

-ಪ್ರತಿ ಶನಿವಾರ ಅಂಗಡಿಯ ಮುಖ್ಯ ದ್ವಾರದಲ್ಲಿ 1 ನಿಂಬೆ ಹಣ್ಣು ಮತ್ತು 7 ಹಸಿಮೆಣಸಿನಕಾಯಿಯನ್ನು ಕಟ್ಟಿ. ಪ್ರತಿದಿನ ಸಂಜೆ ಲಕ್ಷ್ಮಿದೇವಿಯ ಫೋಟೊದ ಮುಂದೆ ತುಪ್ಪದ ದೀಪ ಹಚ್ಚಿ. ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ಶಿವಲಿಂಗವನ್ನು ಸ್ಥಾಪಿಸಿ. ಇದರಿಂದ ಧನಾತ್ಮಕ ಶಕ್ತಿ ನೆಲೆಸಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...