Kannada Duniya

ಮನೆಯಲ್ಲಿ ಹಣದ ಜಾಗದಲ್ಲಿ ಈ ಹೂವನ್ನು ಇಟ್ಟರೆ ಸಂಪತ್ತಿನ ಕೊರತೆ ಕಾಡುವುದಿಲ್ಲ….!

ಧರ್ಮಗ್ರಂಥಗಳ ಪ್ರಕಾರ ಕೆಲವು ಸಸ್ಯಗಳು ದೈವಿಕ ಶಕ್ತಿಯಿಂದ ತುಂಬಿರುತ್ತವೆ. ಹಾಗಾಗಿ ಹಿಂದೂಧರ್ಮದಲ್ಲಿ ಅನೇಕ ಮರಗಳು ಮತ್ತು ಸಸ್ಯಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ಪಲಾಶ ಹೂವನ್ನು ಇಡಿ. ಇದರಿಂದ ಅನೇಕ ಪ್ರಯೋಜನವನ್ನು ಪಡೆಯಬಹುದು.

ಪಲಾಶದ ಹೂವು ಮತ್ತು ಒಂದು ತೆಂಗಿನಕಾಯಿಯನ್ನು ಬಿಳಿ ಬಟ್ಟೆಯಲ್ಲಿ ಇರಿಸಿ ಮನೆಯಲ್ಲಿ ಸಂಪತ್ತು ಇಡುವ ಸ್ಥಳದಲ್ಲಿ ಇಡಿ. ಇದರಿಂದ ಲಕ್ಷ್ಮಿದೇವಿ ಆಶೀರ್ವಾದ ಸಿಗುತ್ತದೆಯಂತೆ.

ಶುಕ್ರವಾರದಂದು ಪಲಾಶ ಮರವನ್ನು ಪೂಜಿಸಿ. ಇದರಲ್ಲಿ ತ್ರಿಮೂರ್ತಿಗಳು ನೆಲೆಸಿರುವುದರಿಂದ ಅವರ ಅನುಗ್ರಹ ನಿಮಗೆ ದೊರೆಯುತ್ತದೆ.

Flowers used for pooja: ದೇವರಿಗೆ ಅರ್ಪಿಸಿದ ಹೂವಿನಿಂದ ಹೀಗೆ ಮಾಡಿದರೆ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ…!

ಭಾನುವಾರದಂದು ಶುಭ ಮುಹೂರ್ತದಲ್ಲಿ ಪಲಾಶ ಮರದ ಬೇರನ್ನು ತಂದು ಹತ್ತಿ ದಾರದಲ್ಲಿ ಸುತ್ತಿ ಬಲಗೈಗೆ ಕಟ್ಟಿಕೊಳ್ಳಿ. ಇದರಿಂದ ರೋಗದಿಂದ ಬಳಲುತ್ತಿರುವವರು ಕಾಯಿಲೆ ವಾಸಿಯಾಗಿ ರೋಗ ನಿವಾರಣೆಯಾಗುತ್ತದೆ.

ಪಲಾಶ ಮರದ ತುಂಡುಗಳನ್ನು ಹವನಕ್ಕೆ ಬಳಸಿದರೆ ನಿಮಗಿರುವ ದೋಷಗಳು ನಿವಾರಣೆಯಾಗುತ್ತದೆ, ಮನಸ್ಸಿಗೆ ಶಾಂತಿ ದೊರಕುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...