ಹಿಂದೂಧರ್ಮದಲ್ಲಿ ಮಕರ ಸಂಕ್ರಾಂತಿಯ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಹಾಗಾಗಿ ಇಂತಹ ಮಹತ್ತರವಾದ ದಿನದಂದು ನೀವು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಕಾಣುತ್ತೀರಿ. ಹಾಗಾಗಿ ಮಕರ ಸಂಕ್ರಾಂತಿಯಂದು ಈ ವಸ್ತುಗಳನ್ನು ದಾನ ಮಾಡಿ.
ಮಕರ ಸಂಕ್ರಾಂತಿಯ ದಿನ ಎಳ್ಳಿನ ಬೀಜಗಳನ್ನು ದಾನ ಮಾಡಿ. ಇದರಿಂದ ಸೂರ್ಯ ಮತ್ತು ಶನಿ ಸಂತೋಷಗೊಳ್ಳುತ್ತಾರೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಪ್ರತಿ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.
ಈ ದಿನ ತುಪ್ಪವನ್ನು ದಾನ ಮಾಡಿ. ಇದರಿಂದ ನೀವು ಎಲ್ಲಾ ರೋಗ ರುಜಿನಗಳಿಂದ ಮುಕ್ತಿ ಪಡೆಯುತ್ತೀರಿ. ಇದರಿಂದ ಸೂರ್ಯ ಮತ್ತು ಗುರುವಿನ ಸ್ಥಾನ ಬಲವಾಗುತ್ತದೆ.
ಈ ದಿನ ಬೆಲ್ಲವನ್ನು ದಾನ ಮಾಡಿ. ಹಾಗೇ ಅಕ್ಕಿ, ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಲಡ್ಡುಗಳನ್ನು ದಾನ ಮಾಡಿ. ಇದರಿಂದ ನೀವು ಸಮಾಜದಲ್ಲಿ ಗೌರವವನ್ನು ಪಡೆಯುತ್ತೀರಿ ಮತ್ತು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ.
ಮಕರ ಸಂಕ್ರಾಂತಿಯ ದಿನ ಖಿಚಡಿಯನ್ನು ದಾನ ಮಾಡಿ. ಇದರಿಂದ ಸೂರ್ಯ, ಚಂದ್ರ ಮತ್ತು ಗುರುವಿನ ಸ್ಥಾನ ಬಲಗೊಳ್ಳುತ್ತದೆ. ಇದರಿಂದ ನಿಮಗೆ ಶುಭಫಲಗಳು ದೊರೆಯುತ್ತದೆ.