ಬುಧನು ಬುದ್ಧಿವಂತಿಕೆಯ ಸಂಕೇತ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬುಧನ ಅನುಗ್ರಹದಿಂದ ವೃತ್ತಿಯಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಒಂದು ವೇಳೆ ಬುಧನು ಕೋಪಗೊಂಡರೆ ಅದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಬುಧನ ಕೋಪದಿಂದ ತಪ್ಪಿಸಿಕೊಳ್ಳಲು ಈ ಪರಿಹಾರಗಳನ್ನು ಮಾಡಿ.
ಕನ್ಯಾ ಮತ್ತು ಮಿಥುನ ರಾಶಿಯ ಅಧಿಪತಿ ಬುಧ. ಹಾಗಾಗಿ ಈ ರಾಶಿಯವರು ಹಸಿರು ವಸ್ತ್ರಗಳನ್ನು ಧರಿಸಬೇಕು. ಮತ್ತು ಹಸಿರು ಬಣ್ಣಬದ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು.
ಬುಧವಾರ ಈ ಕ್ರಮಗಳನ್ನು ಪಾಲಿಸಿದರೆ ಅರ್ಧಕ್ಕೆ ನಿಂತ ನಿಮ್ಮ ಕಾರ್ಯಗಳು ಪೂರ್ತಿಯಾಗುತ್ತದೆಯಂತೆ…!
ಬುಧನ ಕೋಪವನ್ನು ತಣ್ಣಗಾಗಿಸಲು ವಿಷ್ಣುವನ್ನು ಪೂಜಿಸಿ. ಹಾಗೇ ವೃತ್ತಿ, ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲು ಬುಧವಾರದಂದು ಉಪವಾಸ ಮಾಡಿ.
ಹಾಗೇ ಬುಧವಾರದಂದು ಕಂಚಿನ ಪಾತ್ರೆಗಳು, ಹಸಿರು ಮತ್ತು ನೀಲಿ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಿ.
ಹಾಗೇ ಬುಧನ ಕೋಪದ ಪರಿಣಾಮವನ್ನು ತಪ್ಪಿಸಲು ಬುಧವಾರದಂದು ಗಣಪತಿಯನ್ನು ಪೂಜಿಸಿ. ಇದರಿಂದ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ.