Kannada Duniya

ದೇವರಿಗೆ ಅರ್ಪಿಸಿದ ಹೂವಿನಿಂದ ಹೀಗೆ ಮಾಡಿದರೆ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ…!

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವವಿದೆ. ದೇವರ ಪೂಜೆ ಮಾಡುವಾಗ ಎಲ್ಲರೂ ದೇವರಿಗೆ ಹೂವನ್ನು ಅರ್ಪಿಸುತ್ತಾರೆ. ಆದರೆ ಮರುದಿನ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಹೀಗೆ ಮಾಡಿದರೆ ದೇವರ ಕೋಪಕ್ಕೆ ಗುರಿಯಾಗುತ್ತೀರಿ. ಹಾಗಾಗಿ ಪಂಡಿತರು ಸಲಹೆ ನೀಡಿದ್ದಂತೆ ದೇವರ ಪೂಜೆಯ ಬಳಿಕ ಹೂವನ್ನು ಈ ರೀತಿಯಾಗಿ ಬಳಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆಯಂತೆ.

ದೇವರ ಪೂಜೆಗೆ ಬಳಸಿದ ಹೂ ಮರುದಿನ ಒಣಗುತ್ತದೆ. ಹಾಗಾಗಿ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಅದನ್ನು ತಂದು ಮರದ ಬುಡಕ್ಕೆ ಹಾಕಿ. ಆಗ ಹೂ ಮಣ್ಣಲ್ಲಿ ಬೆರೆತು ಮರಕ್ಕೆ ಗೊಬ್ಬರವಾಗುತ್ತದೆ. ಇದರಿಂದ ಮರಗಳು ಚೆನ್ನಾಗಿ ಬೆಳೆಯುತ್ತವೆ. ಪ್ರಕೃತಿಯು ಹಚ್ಚಹಸಿರಾಗಿರುತ್ತದೆ. ಇದರಿಂದ ದೇವರು ಸಂತಸಗೊಂಡು ನಿಮ್ಮ ಮೇಲೆ ಕೃಪೆ ತೋರುತ್ತಾನೆ.

ದೇವರಿಗೆ ಅರ್ಪಿಸಿದಂತಹ ಗುಲಾಬಿ ಹೂ, ದಾಸವಾಳ ಮುಂತಾದ ಹೂಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ನಿಮ್ಮ ಆಹಾರದಲ್ಲಿ ಸೇವಿಸಲು, ಕೂದಲಿಗೆ, ಚರ್ಮಕ್ಕೆ ಬಳಸಬಹುದು. ಇದರಿಂದ ನಿಮ್ಮ ಸೌಂದರ್ಯವು ವೃದ್ದಿಸುತ್ತದೆ ಮತ್ತು ದೇವರ ಪ್ರಸಾದ ಸ್ವೀಕರಿಸಿದ್ದರಿಂದ ದೇವರ ಕೃಪೆಗೂ ಪಾತ್ರರಾಗುತ್ತೀರಿ.

ಹಣದ ಸಮಸ್ಯೆ ನಿವಾರಿಸಲು ಸೋಮವಾರದಂದು ಶಿವನನ್ನು ಈ ರೀತಿ ಪೂಜಿಸಿ

ಹಾಗೇ ದೇವರಿಗೆ ಅರ್ಪಿಸಿದ ಹೂಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಹಣವಿಡುವ ಸ್ಥಳದಲ್ಲಿಟ್ಟರೆ ದೇವರ ಅನುಗ್ರಹದಿಂದ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...