Kannada Duniya

ದಾಸವಾಳ ಎಲೆಯಿಂದ ಮಂಗಳವಾರದಂದು ಹೀಗೆ ಮಾಡಿದರೆ ಹಣದ ಸಮಸ್ಯೆ ದೂರವಾಗುತ್ತದೆ….!

ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ, ಇದರಿಂದ ಅವರು ಹಣಕ್ಕಾಗಿ ಸಾಲ ಮಾಡಿಕೊಂಡು ಸಾಲದ ಹೊರೆಯಲ್ಲೇ ಮುಳುಗುತ್ತಾರೆ. ಅವರು ಇಡೀ ಜೀವನವನ್ನು ಸಾಲ ತೀರಿಸಲು ಕಳೆದುಬಿಡುತ್ತಾರೆ. ಹಾಗಾಗಿ ಅಂತವರು ತಮ್ಮ ಹಣಕಾಸಿನ ಸಮಸ್ಯೆಯಿಂದ ಹೊರಗೆ ಬರಲು ಮಂಗಳವಾರದಂದು ದಾಸವಾಳ ಎಲೆಯಿಂದ ಹೀಗೆ ಮಾಡಿ.

ಮಂಗಳವಾರದಂದು ಶ್ರೀಗಣೇಶನ ಅನುಗ್ರಹ ಪ್ರಾಪ್ತಿಯಾದರೆ ನಿಮಗೆ ಜೀವನದಲ್ಲಿ ಎದುರಾದ ಸಂಕಷ್ಟ ನಿವಾರಣೆಯಾಗುತ್ತದೆ. ಹಾಗಾಗಿ ಪರಿಹಾರ ಶಾಸ್ತ್ರದಲ್ಲಿ ವಿಶೇಷವಾದ ಮಹತ್ವವುಳ್ಳ ದಾಸವಾಳವನ್ನು ಬಳಸಿಕೊಂಡು ಈ ತಂತ್ರ ಮಾಡಿ. ಮಂಗಳವಾರದಂದು 21 ದಾಸವಾಳದ ಎಲೆ ಮತ್ತು ಕಡ್ಡಿಯನ್ನು ಮನೆಗೆ ತಂದು ಸ್ವಚ್ಛ ಮಾಡಿ ಅಷ್ಟಗಂಧದ ಪುಡಿಯನ್ನು ಎಳ್ಳೆಣ್ಣೆಯಿಂದ ಮಿಕ್ಸ್ ಮಾಡಿ ದಾಸವಾಳ ಎಲೆಯ ಮೇಲೆ ದಾಸವಾಳದ ಕಡ್ಡಿಯಿಂದ ‘ಓಂ’ ಎಂದು ಬರೆಯಬೇಕು.

ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ಈ ಮುದ್ರೆಗಳನ್ನು ಮಾಡಿ….!

ಅರಿಶಿನದ ಮುದ್ದೆಯಿಂದ ಗಣೇಶನನ್ನು ತಯಾರಿಸಿ ಅದನ್ನುವೀಳ್ಯದೆಲೆಯ ಮೇಲೆ ಇಟ್ಟು ಕುಂಕುಮ, ಅಕ್ಷತೆಯನ್ನು ಹಾಕಬೇಕು. ಬಳಿಕ ಗಣೇಶನಿಗೆ ತುಪ್ಪದ ದೀಪ ಹಚ್ಚಿ ಎಲೆಗಳನ್ನು ಗಣೇಶನ ಮುಂದೆ ಇಟ್ಟು ಪೂಜೆ ಮಾಡಿ ಕಲ್ಲುಸಕ್ಕರೆಯನ್ನು ಗಣೇಶನಿಗೆ ಅರ್ಪಿಸಿ. ಇದನ್ನು 5 ಮಂಗಳವಾರ ಮಾಡಿ. ಬುಧವಾರದಂದು ಆ ಎಲೆಗಳನ್ನು ಮರದಡಿಯಲ್ಲಿ ಹಾಕಬೇಕು. ಹೀಗೆ ಮಾಡಿದರೆ ಹಣದ ಸಮಸ್ಯೆ ದೂರವಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...