Kannada Duniya

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧವಾರ ವೀಳ್ಯದೆಲೆಯನ್ನು ತಿಂದರೆ ಏನಾಗುತ್ತದೆ ಗೊತ್ತಾ…?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿ ದಿನವೂ ಯಾವುದಾದರೂ ದೇವರು ಅಥವಾ ಗ್ರಹಕ್ಕೆ ಸಂಬಂಧಿಸಿದೆ. ಅಂತೆಯೇ ಬುಧವಾರದಂದು ದೇವರಾದ ಗಣೇಶ ಹಾಗೂ ಬುಧ ಗ್ರಹಕ್ಕೆ ಮೀಸಲಿಡಲಾಗಿದೆ. ಹಾಗಾಗಿ ಬುಧವಾರದಂದು ಈ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಬುಧವಾರ ಯಾವುದೇ ಮಹಿಳೆಯನ್ನು ಅವಮಾನಿಸಬಾರದು. ಬುಧವಾರ ಮಂಗಳಮುಖಿಯರಿಗೆ ಅವಮಾನ ಮಾಡಬಾರದು. ಇದರಿಂದ ಬುಧ ದೋಷ ಉಂಟಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬುಧವಾರ ವೀಳ್ಯದೆಲೆಯನ್ನು ತಿನ್ನಬಾರದು. ಇದರಿಂದ ಆರ್ಥಿಕ ನಷ್ಟವಾಗುತ್ತದೆ. ಹಣದ ಕೊರತೆ ಕಾಡುತ್ತದೆ.

ಬುಧವಾರ ಮನೆಯಲ್ಲಿ ಹಾಲನ್ನು ಸುಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನ ಹಾಲನ್ನು ಎಚ್ಚರಿಕೆಯಿಂದ ಕುದಿಸಿ.

ಬುಧವಾರ ಹಣವನ್ನು ಸಾಲ ನೀಡುವುದನ್ನು ತಪ್ಪಿಸಬೇಕು. ಇದರಿಂದ ಹಣಕಾಸಿನ ಸಮಸ್ಯೆ ಸೃಷ್ಟಿಯಾಗುತ್ತದೆ.

ಬುಧವಾರ ಬೂಟುಗಳನ್ನು ಮತ್ತು ಕೂದಲಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಸಮಸ್ಯೆಗಳು ಕಾಡುತ್ತವೆ.

Vastu Tips: ಪೊರಕೆ ಈ ದಿಕ್ಕಿನಲ್ಲಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ….!

ಬುಧವಾರ ಪುರುಷ ತನ್ನ ಅತ್ತೆಯ ಮನೆಗೆ ಹೋಗಬಾರದು. ಬುಧವಾರದ ಪ್ರಯಾಣ ಹಾನಿಕಾರಕವಾಗಿದೆ. ಇದರಿಂದ ಅಪಘಾತ ಸಂಭವಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...