Kannada Duniya

ಗುರುವಾರ ಈ ಕೆಲಸ ಮಾಡಿದರೆ ನೀವು ಬಡವರಾಗುತ್ತೀರಂತೆ…!

ಗುರುವಾರದಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಅಲ್ಲದೇ ಜಾತಕದಲ್ಲಿ ಗುರು ದೋಷವಿರುವವರು ಈ ದಿನ ಕೆಲವು ಪರಿಹಾರಗಳನ್ನು ಮಾಡುವುದರಿಂದ ಗುರುಬಲವನ್ನು ಪಡೆಯಬಹುದು. ಆದರೆ ಗುರುವಾರದಂದು ನೀವು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

ಗುರುವಾರದಂದು ಉಪವಾಸಗಳನ್ನು ಮಾಡಿದರೆ ಬಾಳೆಹಣ್ಣ ನ್ನು ಸೇವಿಸಬೇಡಿ. ಯಾಕೆಂದರೆ ಈ ದಿನ ಬಾಳೆ ಮರವನ್ನು ಪೂಜಿಸಲಾಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ದಾನ ಮಾಡಿದರೆ ಒಳ್ಳೆಯದು.

ಗುರುವಾರದಂದು ಕೂದಲನ್ನು ತೊಳೆಯಬೇಡಿ. ವಿಶೇಷವಾಗಿ ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಬಾರದಂತೆ. ಇದರಿಂದ ನಿಮ್ಮ ನೆಮ್ಮದಿ ಕೆಡುತ್ತದೆಯಂತೆ.

ಈ ದಿನ ಕೂದಲು, ಉಗುರು ಮತ್ತು ಗಡ್ಡವನ್ನು ಕತ್ತರಿಸಬಾರದಂತೆ. ಇದರಿಂದ ಗುರುದೋಷ ಉಂಟಾಗುತ್ತದೆಯಂತೆ. ಸಮಸ್ಯೆಗಳು ಎದುರಾಗುತ್ತದೆಯಂತೆ.

Chanyaka niti : ಈ ರೀತಿಯ ಜನರು ಭೂಮಿಗೆ ಭಾರವಂತೆ… ಯಾಕೆ ಕೇಳಿ…!

ಗುರುವಾರದಂದು ಹಣದ ವಹಿವಾಟುಗಳನ್ನು ನಡೆಸಬಾರದಂತೆ. ಈ ದಿನ ನೀವು ಯಾರಿಗೂ ಸಾಲ ನೀಡಬಾರದಂತೆ ಮತ್ತು ಸಾಲವನ್ನು ಪಡೆಯಬಾರದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...