ಮನೆಯಿಂದ ಹೊರಗೆ ಹೋಗುವಾಗ ನಾವು ಹೋಗುವ ಕೆಲಸ ಸಂಪೂರ್ಣವಾಗಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರು ಹೊರಗಡೆ ಎಷ್ಟೇ ಪ್ರಯತ್ನಪಟ್ಟರೂ ಕೆಲಸ ಮುಗಿಸಲು ಸಾಧ್ಯವಾಗದೆ ಬೇಸರಗೊಳ್ಳುತ್ತಾರೆ. ಹಾಗಾಗಿ ನೀವು ಹೋದ ಕೆಲಸ ಸಂಪೂರ್ಣವಾಗಬೇಕೆಂದರೆ ಮನೆಯಿಂದ ಹೊರಡುವಾಗ ತಪ್ಪದೇ ಈ ಕೆಲಸಗಳನ್ನು ಮಾಡಿ.
-ಗಣೇಶನನ್ನು ಪೂಜಿಸಿದರೆ ವಿಘ್ನಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಗಣೇಶನನ್ನು ಪೂಜಿಸಿ, ಪ್ರಾರ್ಥಿಸಿ ಹೋಗಿ.
-ಮನೆಯಿಂದ ಹೊರಗೆ ಹೋಗುವಾಗ ಬೆಲ್ಲ ಮತ್ತು ಮೊಸರು ತಿನ್ನಬೇಡಿ. ಒಂದು ವೇಳೆ ತಿಂದರೆ ನೀರು ಕುಡಿದು ಬಳಿಕ ಹೋದರೆ ಕೆಲಸ ಸಫಲವಾಗುತ್ತದೆ.
Chanyaka niti : ಈ ವಿಧದ ಜನರ ಶತ್ರುತ್ವವನ್ನು ಮಾಡಬಾರದು…ಶಾಂತಿಯುತ ಜೀವನ ನಡೆಸಲು…!
-ಕೆಲಸದ ನಿಮಿತ್ತ ಮನೆಯಿಂದ ಹೊರಡುವಾಗ ಕನ್ನಡಿಯಲ್ಲಿ ಮುಖ ನೋಡಿ ಹೋಗಿ. ಇದರಿಂದ ನಿಮ್ಮಲ್ಲಿ ಸಕರಾತ್ಮಕ ಭಾವನೆ ಬೆಳೆದು ನಿಮ್ಮ ಕೆಲಸ ಯಶಸ್ವಿಯಾಗುತ್ತದೆ.
-ಮನೆಯಿಂದ ಹೊರಗೆ ಹೋಗುವಾಗ ಯಾರೊಂದಿಗೂ ಜಗಳವಾಡಬೇಡಿ. ಇದರಿಂದ ನಿಮಗೆ ಕೆಲಸ ಸಂಪೂರ್ಣ ಮಾಡಲು ಸಾಧ್ಯವಾಗುವುದಿಲ್ಲ.