ಶಾಂತಿಯುತ ಜೀವನ ನಡೆಸಲು ಚಾಣಕ್ಯ ನೀತಿ ಯಾವುದೇ ವಿವಾದಕ್ಕೆ ಸಿಲುಕಬಾರದು. ಆದರೆ ತಿಳಿದೋ ತಿಳಿಯದೆಯೋ ಕೆಲವೊಂದು ವಿಷಯದಲ್ಲಿ ಗೊಂದಲಕ್ಕೆ ಸಿಲುಕುತ್ತೇವೆ. ಆದರೆ ಚಾಣಕ್ಯ ನೀತಿಯು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಈ ವಿಧದ ಜನರೊಂದಿಗೆ ಎಂದಿಗೂ ದ್ವೇಷ ಸಾಧಿಸಬಾರದು ಇದು ನಿಮಗೆ ಮಾರಕವಾಗುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ
-ಕೈಯಲ್ಲಿ ಆಯುಧವನ್ನು ಹೊಂದಿರುವವರನ್ನು ವಿರೋಧಿಸಬಾರದು ಅಥವಾ ಜಗಳವಾಡಬಾರದು. ಏಕೆಂದರೆ ಕೋಪ ಹೆಚ್ಚಾದಾಗ ಆಯುಧ ಹೊಂದಿರುವ ವ್ಯಕ್ತಿಯು ತನ್ನ ಅಸ್ತ್ರವನ್ನು ಬಳಸಿ ಎದುರಾಳಿಯನ್ನು ಕೊಲ್ಲಬಹುದು.
-ನಮ್ಮ ಎಲ್ಲಾ ರಹಸ್ಯಗಳನ್ನು ತಿಳಿದಿರುವ ವ್ಯಕ್ತಿಯನ್ನು ವಿರೋಧಿಸಬಾರದು. ಏಕೆಂದರೆ ವಿಭೀಷಣನಿಗೆ ರಾವಣನ ರಹಸ್ಯಗಳು ತಿಳಿದಿತ್ತು ಎಂದು ಹೇಳಲಾಗುತ್ತದೆ, ಅದನ್ನು ಅವರು ಭಗವಾನ್ ರಾಮನಿಗೆ ಹೇಳಿದ್ದರಿಂದ. ಈ ರಾವಣ ಯುದ್ಧದಲ್ಲಿ ಹತನಾದ.
ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಮ್ಮ ಮನೆ ಇದ್ದರೆ ಈ ದೇವರ ಫೋಟೊವನ್ನು ತಪ್ಪದೇ ಹಾಕಿ
– ಒಡೆಯನೊಡನೆಯೂ ರಾಜನೊಡನೆಯೂ ದ್ವೇಷವಿರಬಾರದು. ಅವನು ಅಪಾರವಾದ ಶಕ್ತಿಯನ್ನು ಹೊಂದಿರುವುದರಿಂದ, ಅವನು ನಿಮಗೆ ದೊಡ್ಡ ಹಾನಿ ಮಾಡಬಲ್ಲನು.
-ಒಬ್ಬ ಅತ್ಯಂತ ಶ್ರೀಮಂತ ವ್ಯಕ್ತಿಯೊಂದಿಗೆ ದ್ವೇಷವಿರಬಾರದು. ಏಕೆಂದರೆ ಅವನು ಕಾನೂನು ಮತ್ತು ನ್ಯಾಯವನ್ನು ಸಹ ಖರೀದಿಸಬಹುದು.
-ವೈದ್ಯರೊಂದಿಗೆ ಎಂದಿಗೂ ಜಗಳವಾಡಬಾರದು. ಇಲ್ಲದಿದ್ದರೆ ಅವನು ಯಾವಾಗ ಬೇಕಾದರೂ ನಿನ್ನನ್ನು ತೊಂದರೆಗೆ ಸಿಲುಕಿಸಬಹುದು.
-ಅಡುಗೆ ಮಾಡುವವನಿಗೆ ಎಂದೂ ಕೆಟ್ಟದ್ದನ್ನು ಮಾಡಬಾರದು. ಇಲ್ಲದಿದ್ದರೆ ಹಾನಿಕಾರಕ ಆಹಾರವನ್ನು ನೀಡಬಹುದು.