ಹಣ ಎಲ್ಲರಿಗೂ ಮುಖ್ಯ. ಜೀವನ ನಡೆಸಲು ಹಣದ ಅವಶ್ಯಕತೆ ಹೆಚ್ಚಾಗಿರುತ್ತದೆ. ಒಂದು ವೇಳೆ ನಿಮ್ಮಲ್ಲಿ ಹಣದ ಅಭಾವವಿದ್ದರೆ ಮನೆಯಲ್ಲಿ ಜಗಳ, ಗಲಾಟೆಗಳು ನಡೆಯುತ್ತವೆ. ವ್ಯಕ್ತಿಯ ಸಂತೋಷ, ನೆಮ್ಮದಿ ದೂರವಾಗುತ್ತದೆ. ಹಾಗಾಗಿ ಈ ಹಣದ ಸಮಸ್ಯೆಗಳನ್ನು ನೀಗಿಸಲು ಹಿಟ್ಟಿನಿಂದ ಈ ಪರಿಹಾರಗಳನ್ನು ಮಾಡಿ.
ನಿಮ್ಮ ಮನೆಯಲ್ಲಿ ಹಿಟ್ಟು ಇಡುವ ಪೆಟ್ಟಿಗೆಯಲ್ಲಿ 5 ತುಳಸಿ ಎಲೆಗಳು ಮತ್ತು 2 ಕೇಸರಿ ಬೀಜಗಳನ್ನು ಹಾಕಿ. ಇದರಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.
ಗುರುವಾರ ಹಿಟ್ಟಿನಲ್ಲಿ ಸ್ವಲ್ಪ ಅರಿಶಿನ ಸೇರಿಸಿ ಹಸುವಿಗೆ ಆಹಾರ ನೀಡುವುದರಿಂದ ಆದಾಯ ಹೆಚ್ಚಾಗುತ್ತದೆ. ಮತ್ತು ಮನೆಯಲ್ಲಿರುವ ನಕರಾತ್ಮಕ ಶಕ್ತಿ ದೂರವಾಗುತ್ತದೆ.
ಶನಿವಾರ ಮನೆಯಲ್ಲಿ ಗೋಧಿ ಹಿಟ್ಟನ್ನು ರುಬ್ಬಿ ತಯಾರಿಸಿದರೆ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ. ಹಾಗೇ ಗೋಧಿಯನ್ನು ರುಬ್ಬುವಾಗ ಅದಕ್ಕೆ ಸ್ವಲ್ಪ ಕಡಲೆಯನ್ನು ಸೇರಿಸಿ. ಇದರಿಂದ ಮನೆಯಲ್ಲಿ ಹಣ ಉಳಿಯುತ್ತದೆ.
ಮನೆಯ ಈ ದಿಕ್ಕಿನಲ್ಲಿ ಅಲೋವೆರಾ ಬೆಳೆಸುವುದರಿಂದ ಸಂಪತ್ತು ಹೆಚ್ಚಾಗಿ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆಯಂತೆ..!
ಹಿಟ್ಟಿಗೆ ಸ್ವಲ್ಪ ಪ್ರಮಾಣದ ಸಕ್ಕರೆ ಸೇರಿಸಿ ಮತ್ತು ಇರುವೆಗಳಿಗೆ ಹಾಕಿದರೆ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಶಾಶ್ವತವಾಗಿ ನಿವಾರಣೆಯಾಗುತ್ತದೆ. ಅದೃಷ್ಟ ಒಲಿದುಬರುತ್ತದೆ. ಶನಿ, ರಾಹು ಮತ್ತು ಕೇತುಗಳ ಕೆಟ್ಟ ಪರಿಣಾಮಗಳಿಂದ ಸ್ವಾತಂತ್ರ್ಯ ಪಡೆಯುತ್ತಾರೆ.