Kannada Duniya

ಈ ದಿನಗಳಲ್ಲಿ ಹಣದ ವ್ಯವಹಾರವನ್ನು ಈ ದಿನಗಳಲ್ಲಿ ಮಾಡಬೇಡಿ…!

ಜ್ಯೋತಿಷ್ಯಶಾಸ್ತ್ರದಲ್ಲಿ ಯಾವುದೇ ಕೆಲಸವನ್ನು ಶುಭ ಮಹೂರ್ತದಲ್ಲಿ ಮಾಡಬೇಕು ಎಂದು ಹೇಳಲಾಗುತ್ತದೆ. ಇಲ್ಲವಾದರೆ ಇದರಿಂದ ನಿಮಗೆ ಕೆಟ್ಟದಾಗಬಹುದು. ಅದಕ್ಕಾಗಿ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ನಕ್ಷತ್ರ, ತಿಥಿ, ದಿನವನ್ನು ಲೆಕ್ಕಾಚಾರ ಹಾಕುತ್ತಾರೆ. ಹಾಗೇ ಹಣದ ವ್ಯವಹಾರ ಮಾಡುವಾಗ ಕೂಡ ಕೆಲವು ಶುಭ ದಿನಗಳಲ್ಲಿ ಮಾಡಬೇಕು. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆಯಂತೆ.

-ಹಣದ ವ್ಯವಹಾರವನ್ನು ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಶ್ರಾವಣ, ಧನಿಷ್ಠ, ಶತಭಿಷ, ಸ್ವಾತಿ, ಅನುರಾಧ, ಚಿತ್ರ, ವಿಶಾಖ ಮತ್ತು ರೇವತಿ ಈ ನಕ್ಷತ್ರಗಳಲ್ಲಿ ನಡೆಸಿದರೆ ಮಂಗಳಕರವಾಗಲಿದೆ.

– ಬೇರೆಯವರಿಂದ ಹಣವನ್ನು ಸಾಲವಾಗಿ ಮಂಗಳವಾರದಂದು ತೆಗೆದುಕೊಳ್ಳಬಾರದು. ಯಾಕೆಂದರೆ ಇದನ್ನು ಮರುಪಾವತಿ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ಸಾಲ ಮರುಪಾವತಿ ಮಾಡುವಾಗ ನೀವು ಮಂಗಳವಾರದಂದು ಮಾಡಬಹುದು. ಇದರಿಂದ ನೀವು ಮತ್ತೆ ಸಾಲ ಪಡೆಯುವ ಪರಿಸ್ಥಿತಿ ಬರುವುದಿಲ್ಲ.

Chanakya niti : ಇಂತಹ ಅಭ್ಯಾಸದಿಂದ ಯೌವನದಲ್ಲಿ ದೂರವಿರಿ, ಇಲ್ಲವಾದರೆ ಜೀವನ ನಾಶವಾಗುತ್ತದೆಯಂತೆ…..!

-ಹಾಗೇ ಬುಧವಾರದಂದು ಯಾರಿಗೂ ನೀವು ಸಾಲ ನೀಡಬೇಡಿ. ಯಾಕೆಂದರೆ ಈ ದಿನ ನೀಡಿದ ಸಾಲವನ್ನು ನೀವು ಮರಳಿ ಪಡೆಯಲು ತುಂಬಾ ಕಷ್ಟವಾಗುತ್ತದೆ. ಹಾಗೇ ಯಾವುದೇ ರೀತಿಯ ಹೂಡಿಕೆಗಳನ್ನು ಮಾಡಲು ಬುಧವಾರ ಬಹಳ ಶುಭಕರವಾಗಿದೆ. ಇದರಿಂದ ನಿಮ್ಮ ಹೂಡಿಕೆ ದುಪ್ಪಟ್ಟಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...