ದೀಪಾವಳಿಗೆ ಹಿಂದೂಗಳು ಹೆಚ್ಚಿನ ಮಹತ್ವ ನೀಡುತ್ತಾರೆ. ಎಲ್ಲರೂ ದೀಪಾವಳಿ ಹಬ್ಬಕ್ಕಾಗಿ ಮೊದಲೇ ತಯಾರಿ ಮಾಡಿಕೊಳ್ಳುತ್ತಾರೆ. ಅಂದು ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ದೀಪಾವಳಿಗೂ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ.
-ಮನೆಯಲ್ಲಿ ಕೆಟ್ಟು ಹೋದ ಗೋಡೆ ಗಡಿಯಾರ, ಕೈ ಗಡಿಯಾರಗಳನ್ನು ಮನೆಯಿಂದ ಹೊರಗೆ ಹಾಕಿ. ಇಲ್ಲವಾದರೆ ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ.
-ಮನೆಯಲ್ಲಿ ಒಡೆದ ವಿಗ್ರಹಗಳಿದ್ದರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಇಲ್ಲವಾದರೆ ಇದರಿಂದ ಮನೆಯಲ್ಲಿ ದುರಾದೃಷ್ಟ ಹೆಚ್ಚಾಗುತ್ತದೆ.
-ಮನೆಯಲ್ಲಿ ಮುರಿದ ಮೇಜು, ಕುರ್ಚಿ ಮುಂತಾದ ಪೀಠೋಪಕರಣಗಳಿದ್ದರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಹಾಗೇ ಹಾಳಾದ ಚಪ್ಪಲಿ, ಬೂಟುಗಳನ್ನು ಎಸೆಯಿರಿ. ಇಲ್ಲವಾದರೆ ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಕಸದ ಬುಟ್ಟಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು…?… ವಾಸ್ತು ಶಾಸ್ತ್ರದ ಈ ನಿಯಮಗಳನ್ನು ತಿಳಿಯಿರಿ…!
-ಮನೆಯಲ್ಲಿ ಒಡೆದ ಗಾಜುಗಳಿದ್ದರೆ ಅದನ್ನು ಮನೆಯಿಂದ ಎಸೆಯಿರಿ. ಹಾಳಾದ ಲೈಟ್ ಗಳನ್ನು ಸರಿಪಡಿಸಿ. ಇಲ್ಲವಾದರೆ ಮನೆಯಲ್ಲಿ ಕೆಟ್ಟಶಕ್ತಿಗಳ ಹಾವಳಿ ಹೆಚ್ಚಾಗುತ್ತದೆ.
-ಒಡೆದು ಹೋದ ಪಾತ್ರೆಗಳನ್ನು ಅಡುಗೆ ಮನೆಯಿಂದ ಹೊರಗೆ ಹಾಕಿ. ಇಲ್ಲವಾದರೆ ಇದರಿಂದ ಅಡುಗೆ ತಯಾರಿಸಿದರೆ ಆಹಾರ, ಸಂಪತ್ತಿನಲ್ಲಿ ಕೊರತೆ ಕಾಡುತ್ತದೆ.