Kannada Duniya

ಅರಳೀಮರದ ಎಲೆ ಬಳಸಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ…!

ಹಿಂದೂಧರ್ಮದಲ್ಲಿ ಗಿಡ ಮರಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಹಾಗಾಗಿ ಅರಳೀಮರ, ಆಲದ ಮರ, ಶಮಿ ವೃಕ್ಷ, ತುಳಸಿ ಮುಂತಾದವುಗಳನ್ನು ಪೂಜೆ ಮಾಡುತ್ತಾರೆ. ಅದರಲ್ಲೂ ಅರಳೀಮರದ ಎಲೆಗಳನ್ನು ಬಳಸಿಕೊಂಡು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಂತೆ. ಅದು ಹೇಗೆಂಬುದನ್ನು ತಿಳಿದುಕೊಳ್ಳಿ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರ ಅಥವಾ ಶನಿವಾರದಂದು ಅರಳೀಮರದ ಎಲೆಗಳನ್ನು ಕಿತ್ತು ಗಂಗಾಜಲದಲ್ಲಿ ತೊಳೆದು ಅದರ ಮೇಲೆ ಅರಿಶಿನ ಮತ್ತು ಮೊಸರನ್ನು ಹಚ್ಚಿ ಅದಕ್ಕೆ ಪೂಜೆ ಮಾಡಿ ಅದನ್ನು ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಜೀವನದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ಜ್ಯೋತಿಷ್ಯ : ಬೇವಿನ ಮರದ ಪ್ರಾಮುಖ್ಯತೆಯನ್ನು ತಿಳಿಯಿರಿ..!

ಹಾಗೇ 11 ಅರಳೀಮರದ ಎಲೆಗಳನ್ನು ತೆಗೆದುಕೊಂಡು ನೀರಿನಿಂದ ತೊಳೆದು ಅದಕ್ಕೆ ಅರಿಶಿನ, ಕುಂಕುಮ , ಶ್ರೀಗಂಧ ಬೆರೆಸಿ ಅದರಿಂದ ಶ್ರೀರಾಮನೆಂದು ಬರೆದು ಆ ವೇಳೆ ಹನುಮ ಚಾಲೀಸ್ ಪಠಿಸಿ ಹಾರವನ್ನು ತಯಾರಿಸಿ ಹನುಮಂತನ ದೇವಾಲಯಕ್ಕೆ ಅರ್ಪಿಸಿ. ಇದರಿಂದ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...