ಹಲವು ಬಾರೀ ಪ್ರಯತ್ನಿಸಿದರು ಕೆಲವರಿಗೆ ಕೆಲಸ ಪಡೆಯಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ನಾವು ನಿರೀಕ್ಷಿಸಿದಂತೆ ಬದುಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ವಾಸ್ತುವಿನಲ್ಲಿ ಕೆಲವು ಪರಿಹಾರವಿದೆ. ಅದನ್ನು ಪಾಲಿಸಿದರೆ ಉದ್ಯೋಗ ಪಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ವಾಸ್ತು ನಿಯಮವನ್ನು ಪಾಲಿಸಿ.
-ನೀವು ಉದ್ಯೋಗದ ಸಂದರ್ಶನಕ್ಕೆ ಹೋಗುತ್ತಿದ್ದರೆ ನಿಮ್ಮ ಬಟ್ಟೆಗಳನ್ನು ಆಯ್ಕೆ ಮಾಡುವಾಗ ಕೆಂಪು ಬಣ್ಣಕ್ಕೆ ಆದ್ಯತೆ ನೀಡಿ. ಅಥವಾ ಜೇಬಿನಲ್ಲಿ ಕೆಂಪು ಕರವಸ್ತ್ರ ಇಡಬಹುದು.
-ಹೆಚ್ಚಾಗಿ ಉದ್ಯೋಗಕ್ಕೆ ಸಂಬಂಧಪಟ್ಟ ಸಂದರ್ಶನಕ್ಕೆ ಹೋಗುವಾಗ ಹಳದಿ, ಕೆಂಪು ಮತ್ತು ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸಿ. ಇವುಗಳನ್ನು ಧರಿಸಿದರೆ ಉದ್ಯೋಗ ಪಡೆಯುವ ಸಾಧ್ಯತೆ ಇದೆ.
-ಸಂದರ್ಶನಕ್ಕೆ ಹೋಗುವ ಮೊದಲು ಗಣೇಶನನ್ನು ಪ್ರಾರ್ಥಿಸಿ. ಇದರಿಂದ ಉದ್ಯೋಗದಲ್ಲಿ ಎದುರಾಗುವ ವಿಘ್ನಗಳು ನಿವಾರಣೆಯಾಗುತ್ತದೆ ಮತ್ತು ಹೋದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಈ ವಾಸ್ತುದೋಷ ನಿಮ್ಮ ಮನೆಯಲ್ಲಿದ್ದರೆ ನಿಮ್ಮ ಉದ್ಯೋಗಕ್ಕೆ ಸಮಸ್ಯೆಯಾಗುತ್ತದೆಯಂತೆ
-ನಿಮ್ಮ ಮನೆಯ ಉತ್ತರ ಗೋಡೆಯ ಮೇಲೆ ಕನ್ನಡಿಯನ್ನು ಅಳವಡಿಸಬೇಕು. ಇದರಲ್ಲಿ ನಿಮ್ಮ ಇಡೀ ದೇಹವನ್ನು ನೋಡಿ. ಇದರಿಂದ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವಂತಹ ಅಡೆತಡೆಗಳು ನಿವಾರಣೆಯಾಗುತ್ತದೆ. ನೀವು ಬಯಸಿದ್ದ ಕೆಲಸ ಸಿಗಲು ರುದ್ರಾಕ್ಷ ಮಾಲೆ ಧರಿಸಿ.