ಜ್ಯೋತಿಷ್ಯದಲ್ಲಿ ಶುಕ್ರನನ್ನು ಮಂಗಳ ಗ್ರಹವೆಂದು ಕರೆಯಲಾಗುತ್ತದೆ. ಯಾವುದೇ ಸುಖ-ಸಮೃದ್ಧಿ, ಭೌತಿಕ ಸುಖ, ಆನಂದ ಐಷರಾಮಿ , ಸೌಂದರ್ಯ ಮತ್ತು ವೈವಾಹಿಕ ಸಂತೋಷಕ್ಕೆ ಕಾರಣವಾದ ಗ್ರಹವಾಗಿದೆ. ಶುಕ್ರ ಗ್ರಹವು ಜಾತಕದಲ್ಲಿ ಪ್ರಬಲ ಸ್ಥಾನದಲ್ಲಿದ್ದರೆ ವ್ಯಕ್ತಿ ಜೀವನದಲ್ಲಿ ಎಲ್ಲಾ ಸಂತೋಷ ಪಡೆಯುತ್ತಾನೆ. ಈ ಶುಕ್ರವು ಗ್ರಹವು ಆಗಸ್ಟ್ 11ರಂದು ಕನ್ಯಾರಾಶಿಗೆ ಪ್ರವೇಶಿಸಲಿದೆ. ಇದರಿಂದ ಈ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ.
ವೃಷಭ ರಾಶಿ : ಇವರ ಜ್ಞಾನ ಮತ್ತು ಆದಾಯ ಹೆಚ್ಚಳವಾಗುವ ಸಂಭವವಿದೆ. ವ್ಯಾಪಾರ ವಿಸ್ತರಣೆಗೆ ಅವಕಾಶಗಳಿವೆ. ಕೆಲಸದ ಸ್ಥಳಗಳಲ್ಲಿ ನೀವು ಗೌರವ ಪಡೆಯುತ್ತೀರಿ. ಆದರೆ ನಿಮ್ಮ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಹೊಂದಬಹುದು.
ಮಿಥುನ ರಾಶಿ : ಇವರು ವಾಹನಗಳನ್ನು ಖರೀದಿಸಲು ಶುಭ ಸಮಯ. ನೀವು ಕಷ್ಟಪಟ್ಟು ಕೆಲಸ ಮಾಡುವ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆದಾಯ ಹೆಚ್ಚಳವಾಗಲಿದೆ.
ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ಪ್ರತಿಭಾವಂತರಾಗಿರುತ್ತಾರೆ, ಕಚೇರಿಯಲ್ಲಿ ಬಾಸ್ ಆಗುತ್ತಾರಂತೆ
ತುಲಾ ರಾಶಿ : ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಬಹಳ ಅನುಕೂಲಕರವಾಗಲಿದೆ. ನೀವು ಕೆಲಸದ ಸಮಯದಲ್ಲಿ ಶುಭ ಫಲಿತಾಂಶ ಪಡೆಯುತ್ತೀರಿ. ಆದಾಯ ಹೆಚ್ಚಾಗುತ್ತದೆ.