Kannada Duniya

ಶನಿದೇವನ ಆಶೀರ್ವಾದ ಪಡೆಯಲು ಶನಿವಾರದಂದು ಈ ಮರದ ಎಲೆಗಳ ಮಾಲೆಯನ್ನು ಧರಿಸಿ…!

ಹಿಂದೂಧರ್ಮದಲ್ಲಿ ಅನೇಕ ಮರಗಳನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಕೆಲವು ಮರಗಳಲ್ಲಿ ದೇವರುಗಳು ನೆಲೆಸಿರುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಕೆಲವು ಮರಗಳನ್ನು ನಿಯಮಗಳಿಗನುಸಾರವಾಗಿ ಪೂಜಿಸಿದರೆ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಹಾಗಾಗಿ ಶನಿದೇವನ ಆಶೀರ್ವಾದ ಪಡೆಯಲು ಶನಿವಾರದಂದು ಈ ಮರದ ಎಲೆಗಳ ಮಾಲೆಯನ್ನು ಧರಿಸಿ.

ಶಾಸ್ತ್ರಗಳ ಪ್ರಕಾರ, ಶನಿದೋಷದಿಂದ ಮುಕ್ತಿ ಪಡೆಯಲು ಬೇವಿನ ಮರದ ಎಲೆಗಳಿಂದ ತಯಾರಿಸಿದ ಮಾಲೆಯನ್ನು ಧರಿಸಿ. ಇದರಿಂದ ಶನಿದೋಷ ನಿವಾರಣೆಯಾಗುತ್ತದೆ. ಮತ್ತು ಶನಿಯ ಕೆಟ್ಟ ದೃಷ್ಟಿಯಿಂದಾಗುವ ಸಮಸ್ಯೆ ಕಡಿಮೆಯಾಗುತ್ತದೆ.

Bayleaves for hairloss: ಕೂದಲುದುರುವ ಸಮಸ್ಯೆಯನ್ನು ಹೋಗಲಾಡಿಸಲು ಪುಲಾವ್ ಎಲೆಗಳನ್ನು ಹೀಗೆ ಬಳಸಿ…!

ಹಾಗೇ ಮನೆಯ ದಕ್ಷಿಣ ದಿಕ್ಕಿನಲ್ಲಿ ಬೇವಿನ ಮರವನ್ನು ನೆಡುವುದು ಉತ್ತಮ. ಇದು ನಿಮ್ಮ ಆರೋಗ್ಯಕ್ಕೆ ಉತ್ತಮ. ಇದರಿಂದ ನಿಮಗೆ ನಿಮ್ಮ ಪೂರ್ವಜರ ಆಶೀರ್ವಾದ ಸಿಗುತ್ತದೆಯಂತೆ. ಪಿತೃದೋಷ ನಿವಾರಣೆಯಾಗುತ್ತದೆ. ಹಾಗೇ ಭಾನುವಾರದಂದು ಬೇವಿನ ಮರಕ್ಕೆ ನೀರು ಹಾಕಿದರೆ ಆರೋಗ್ಯಕ್ಕೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...