ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಸಸ್ಯವನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ದೇವರ ಪೂಜೆಗೂ ಕೂಡ ಬಳಸುತ್ತಾರೆ. ಹಾಗಾಗಿ ಇದರ ಎಲೆಗಳನ್ನು ಯಾವಾಗ ಬೇಕು ಆವಾಗ ಕೀಳುವ ಹಾಗಿಲ್ಲ. ಇದರಿಂದ ನಿನಗೆ ಅಶುಭವಾಗುತ್ತದೆ. ಹಾಗಾಗಿ ತುಳಸಿ ಎಲೆಗಳನ್ನು ಕೀಳುವಾಗ ಈ ನಿಯಮ ಪಾಲಿಸಿ.
-ತುಳಸಿ ಎಲೆಗಳನ್ನು ಕೀಳುವಾಗ ನಿಮ್ಮ ಉಗುರುಗಳನ್ನು ಬಳಸಿ ಕೀಳಬೇಡಿ. ಅದರಬದಲು ನಿಮ್ಮ ಬೆರಳುಗಳನ್ನು ಬಳಸಿ. ಅಥವಾ ಈಗಾಗಲೇ ಬಿದ್ದಿರುವ ಎಲೆಗಳನ್ನು ಬಳಸಬಹುದು.
-ತುಳಸಿ ಎಲೆಗಳನ್ನು ಭಾನುವಾರದಂದು ಕೀಳಬೇಡಿ. ಅಮಾವಾಸ್ಯೆ, ಚತುರ್ದಶಿ ಮತ್ತು ದ್ವಾದಶಿಯಂದು ತುಳಸಿ ಎಲೆಗಳನ್ನು ಕೀಳಬಾರದು. ಇದರಿಂದ ಪಾಪ ಉಂಟಾಗುತ್ತದೆ. ಹಾಗೇ ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕಬಾರದು.
-ಸಂಜೆಯ ವೇಳೆ ತುಳಸಿ ಎಲೆಗಳನ್ನು ಕೀಳಬಾರದು. ಇದರಿಂದ ತುಳಸಿ ಕೋಪಗೊಳ್ಳುತ್ತಾಳೆ. ಹಾಗೇ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳಬಾರದು.
ತುಳಸಿ ಗಿಡವನ್ನು ಮುಟ್ಟುವ ವೇಳೆ ಈ ಬಗ್ಗೆ ಎಚ್ಚರವಿರಲಿ, ಇಲ್ಲವಾದರೆ ಮಹಾಪಾಪ ಕಾಡುತ್ತೆ
-ಒಣಗಿದ ತುಳಸಿ ಗಿಡಗಳನ್ನು ಮನೆಯ ಮುಂದೆ ಇಟ್ಟುಕೊಳ್ಳಬೇಡಿ. ಇದರಿಂದ ಮನೆಗೆ ಅಶುಭ ಎನ್ನಲಾಗುತ್ತದೆ. ಹಾಗೇ ಪೂಜೆಗೆ ಬಳಸಿದ ತುಳಸಿ ಎಲೆಗಳನ್ನು ಎಲೆಂದರಲ್ಲಿ ಎಸೆಯಬೇಡಿ. ಅದು ಒಣಗಿದ ಬಳಿಕ ಅದನ್ನು ಯಾವುದಾದರೂ ಮರದ ಬುಡಕ್ಕೆ ಹಾಕಿ.
Rules for plucking Tulsi leaves