ನಮ್ಮ ಸುತ್ತ ಎರಡು ರೀತಿಯ ಶಕ್ತಿಗಳಿವೆ. ಧನಾತ್ಮಕ ಶಕ್ತಿ ಮತ್ತು ಋಣಾತ್ಮಕ ಶಕ್ತಿ. ಇವು ನಮ್ಮ ಶಕ್ತಿ, ನಡವಳಿಕೆ, ಆಲೋಚನೆಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದೆ. ನಮ್ಮ ಮೇಲೆ ನಕರಾತ್ಮಕ ಶಕ್ತಿಯ ದೃಷ್ಟಿ ಬಿದ್ದಾಗ ನಮ್ಮ ಜೀವನದಲ್ಲಿ ಸಮಸ್ಯೆಗಳು ತಲೆದೋಗುತ್ತವೆ. ಹಾಗಾಗಿ ಈ ಕೆಟ್ಟ ದೃಷ್ಟಿಯ ಬಗ್ಗೆ ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳಿ.
ಕೆಟ್ಟ ದೃಷ್ಟಿ ನಮ್ಮ ಮೇಲೆ ಬಿದ್ದಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಿರಾಶೆಯಾಗುತ್ತದೆ. ತಲೆಯಲ್ಲಿ ಯಾವಾಗಲೂ ನೋವು, ಆತಂಕ ಇರುತ್ತದೆ. ಕುಟುಂಬದ ಸದಸ್ಯರು ಕಾಯಿಲೆಗೆ ತುತ್ತಾಗುತ್ತಾರೆ. ಆರ್ಥಿಕ ಸ್ಥಿತಿ ದುರ್ಬಲಗೊಳ್ಳುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುತ್ತದೆ. ಮಗು ಹಠ ಮಾಡುತ್ತದೆ, ಅನಾರೋಗ್ಯಕ್ಕೊಳಗಾಗುತ್ತಿರುತ್ತದೆ.
Rahu movement: ಏಪ್ರಿಲ್ 12ರಿಂದ ಮೇಷರಾಶಿಗೆ ರಾಹು ಸಂಚಾರ; ಈ ರಾಶಿಯವರ ಬುದ್ದಿಗೆ ಮಂಕು ಕವಿಯಬಹುದು ಎಚ್ಚರ…!
ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ರಾಹು ಆರೋಹಣ ಮತ್ತು ಚಂದ್ರ ಪೀಡಿತರಾಗಿದ್ದರೆ, ಆ ವ್ಯಕ್ತಿ ಕೆಟ್ಟ ದೃಷ್ಟಿಗೆ ಒಳಗಾಗುತ್ತಾನೆ. ಆದ್ದರಿಂದ ಜಾತಕದಲ್ಲಿ ರಾಹು ಗ್ರಹದ ದುಷ್ಪರಿಣಾಮವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಬುಧವಾರ ಏಳು ರೀತಿಯ ಧಾನ್ಯಗಳನ್ನು ದಾನ ಮಾಡುವುದು ಸೂಕ್ತ. ದೃಷ್ಟಿ ದೋಷ ತಪ್ಪಿಸಲು ರಾಹು ಯಂತ್ರವನ್ನು ತಂದು ಪೂಜಿಸಿ. ಒಂಬತ್ತು ಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ದೃಷ್ಟಿ ದೋಷವನ್ನು ತಪ್ಪಿಸಬಹುದು.
Do these to get rid of evil eye problem that can cause problems in your life