ಹೋಳಿ ದಹನ ಮಂಗಳಕರವಾದ ಕಾರ್ಯವೆಂದು ಕರೆಯಲಾಗುತ್ತದೆ. ಯಾಕೆಂದರೆ ಇದು ಕೆಟ್ಟದನ್ನು ಭಸ್ಮ ಮಾಡುವಂತಹ ಕಾರ್ಯವಾಗಿದೆ. ಹಾಗಾಗಿ ನೀವು ಹಲವು ದಿನಗಳಿಂದ ರೋಗ ರುಜಿನಗಳಿಂದ ಬಳಲುತ್ತಿದ್ದರೆ ಅದನ್ನು ನಿವಾರಿಸಲು ಹೋಲಿಕಾ ದಹನಕ್ಕೆ ಈ ವಸ್ತುಗಳನ್ನು ಹಾಕಿ.
ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಹೋಲಿಕಾ ದಹನದ ಭಸ್ಮವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಮಿಕ್ಸ್ ಮಾಡಿ ಮನೆಯ ಸುತ್ತು ಚಿಮುಕಿಸಿ. ಇದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆಯಂತೆ.
ಹಾಗೇ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗಿಗಳಿದ್ದರೆ ಹೋಲಿಕಾ ದಹನದಲ್ಲಿ 2 ಲವಂಗ ಮತ್ತು ವೀಳ್ಯದೆಲೆಯನ್ನು ಹಾಕಿ ಸುಟ್ಟು ಹಾಕಿ. ನಂತರ ಅದರ ಭಸ್ಮವನ್ನು ತೆಗೆದುಕೊಂಡು ರೋಗಿಗಳಿಗೆ ಹಚ್ಚಿ. ಇದರಿಂದ ರೋಗಗಳು ನಿವಾರಣೆಯಾಗುತ್ತದೆ.
ನಿಮಗೆ ಲಕ್ಷ್ಮಿದೇವಿಯ ಆಶೀರ್ವಾದ ಸಿಗಲು ಕೆಂಪು ಬಟ್ಟೆಯಲ್ಲಿ ಹೋಲಿಕಾ ದಹನದ ಭಸ್ಮ ಮತ್ತು ತಾಮ್ರದ ನಾಣ್ಯವನ್ನು ಇಡಿ. ಇದರಿಂದ ಸಂಪತ್ತು ಹೆಚ್ಚಾಗುತ್ತದೆಯಂತೆ.