ಹಿಂದೂಧರ್ಮದಲ್ಲಿ ಮಂಗಳವಾರದಂದು ಭಗವಾನ್ ಹನುಮಂತನನ್ನು ಪೂಜಿಸಲಾಗುತ್ತದೆ.ಹನುಮಂತನನ್ನು ಪೂಜಿಸಿ ಕೆಲವು ಕ್ರಮಗಳನ್ನು ಅನುಸರಿಸಿದರೆ ಹನುಮಂತನ ಅನುಗ್ರಹ ಪಡೆದು ಜೀವನದಲ್ಲಿ ಏಳಿಗೆ ಪಡೆಯಬಹುದು. ಕೆಲಸದಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ . ಅದಕ್ಕಾಗಿ ಈ ನಿಯಮಗಳನ್ನು ಪಾಲಿಸಿ.
– ಮಂಗಳವಾರದಂದು ಬೆಳಿಗ್ಗೆ ಸ್ನಾನಾಧಿಗಳನ್ನು ಮುಗಿಸಿ ಬಾದಾಮಿ ಮರದ ಎಲೆಗಳನ್ನು ತಂದು ಶುದ್ಧ ನೀರಿನಿಂದ ತೊಳೆದು ಹನುಮಂತನ ಫೋಟೊದ ಮುಂದೆ ಇರಿಸಿ. ಆ ಎಲೆಯ ಮೇಲೆ ಕೇಸರಿಯಲ್ಲಿ ಶ್ರೀರಾಮನ ಹೆಸರು ಬರೆದು ಪೂಜಿಸಿ ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಹಣದ ಕೊರತೆ ಕಾಡಲ್ಲ. ಹಾಗೇ ಈ ಎಲೆಗಳು ಒಣಗಿದರೆ ಹರಿಯುವ ನೀರಿನಲ್ಲಿ ಎಸೆಯಿರಿ.
Prosperity: ಮನೆಯಲ್ಲಿ ಈ ವಸ್ತುಗಳಿದ್ದರೆ ಲಕ್ಷ್ಮಿದೇವಿ ಮನೆಬಿಟ್ಟು ಹೋಗುವುದಿಲ್ಲವಂತೆ…!
-ಹನುಮಂತನ ಕೃಪೆ ನಮ್ಮ ಮೇಲಿರಲು ಮಂಗಳವಾರದಂದು ಸೀತೆ-ರಾಮರನ್ನು ಪೂಜಿಸಿ, ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಿ. ಇದರಿಂದ ನಿಮ್ಮ ಆಶಯಗಳು ಈಡೇರುತ್ತದೆ.
-ಮಂಗಳವಾರದಂದು ಹನುಮ ಚಾಲಿಸ್ ಪಠಿಸಿ. ಇದರಿಂದ ಮನೆಯಲ್ಲಿ ನೆಲೆಸಿರುವ ನಕರಾತ್ಮಕ ಶಕ್ತಿ ನಾಶವಾಗಿ ಸಕರಾತ್ಮಕ ಶಕ್ತಿ ನೆಲೆಸುತ್ತದೆ. ಆಗ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತದೆ. ಮತ್ತು ಮಂಗಳವಾರದಂದು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ ಸಾಸಿವೆ ಎಣ್ಣೆ ಅಥವಾ ತುಪ್ಪದ ದೀಪ ಬೆಳಗಿ.
This article explains what all things we need to do on Tuesday to get the God Hanuman blessing