Kannada Duniya

ಮಹಾಶಿವರಾತ್ರಿಯ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆಯಂತೆ!

ಮಹಾಶಿವರಾತ್ರಿಯಂದು ಶಿವನ ಆರಾಧನೆ ಮಾಡಲಾಗುತ್ತದೆ. ಈ ದಿನ ಶಿವನ ಕುರಿತು ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಪಾರ್ವತಿ ವಿವಾಹವಾದರೆಂಬ ನಂಬಿಕೆ ಇದೆ. ಹಾಗಾಗಿ ಇಂತಹ ವಿಶೇಷ ದಿನದಂದು ಈ ವಸ್ತುಗಳನ್ನು ದಾನ ಮಾಡಿದರೆ ಶಿವ ಪಾರ್ವತಿಯರ ಅನುಗ್ರಹ ದೊರೆಯುತ್ತದೆಯಂತೆ.

ತುಪ್ಪ : ಈ ದಿನ ತುಪ್ಪವನ್ನು ದಾನ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತದೆಯಂತೆ. ಅಲ್ಲದೇ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅದು ನಿವಾರಣೆಯಾಗುತ್ತದೆಯಂತೆ.

ಹಾಲು : ಈ ದಿನ ಹಾಲನ್ನು ದಾನ ಮಾಡಿದರೆ ವ್ಯಕ್ತಿಯ ಜಾತಕದಲ್ಲಿ ಚಂದ್ರ ದೋಷವಿದ್ದರೆ ನಿವಾರಣೆಯಾಗುತ್ತದೆಯಂತೆ. ಮತ್ತು ವ್ಯಕ್ತಿ ಮಾನಸಿಕ ಶಾಂತಿಯನ್ನು ಪಡೆಯುತ್ತಾನಂತೆ.

ಕಪ್ಪು ಎಳ್ಳು : ಮಹಾಶಿವರಾತ್ರಿಯ ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆಯಂತೆ. ಹಾಗೇ ಅರ್ಧಕ್ಕೆ ನಿಂತ ನಿಮ್ಮ ಕೆಲಸ ಪೂರ್ಣವಾಗುತ್ತದೆಯಂತೆ.

ವಸ್ತ್ರದಾನ : ಈ ದಿನ ನಿರ್ಗತಿಕರಿಗೆ ವಸ್ತ್ರವನ್ನು ದಾನ ಮಾಡಿದರೆ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುತ್ತದೆಯಂತೆ. ಮತ್ತು ಸಾಲದಿಂದ ಮುಕ್ತಿ ಪಡೆಯುತ್ತೀರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...