ವ್ಯಕ್ತಿ ಹಣ, ಕಾರು, ಬಂಗಲೆ ಎಲ್ಲವನ್ನೂ ಪಡೆಯಲು ಬಯಸುತ್ತಾನೆ. ಅದನ್ನು ಪಡೆಯಲು ತುಂಬಾ ಶ್ರಮಿಸುತ್ತಾನೆ. ಆದರೂ ಅವನಿಗೆ ಸಂತೋಷದ ಜೀವನ ಸಿಗುವುದಿಲ್ಲ. ಹಾಗಾಗಿ ವ್ಯಕ್ತಿಗೆ ಜೀವನದಲ್ಲಿ ಸಂತೋಷ ಸಿಗಲು ಆಚಾರ್ಯ ಚಾಣಕ್ಯರು ತಿಳಿಸಿದ ಈ ನಿಯಮಗಳನ್ನು ಪಾಲಿಸಿ.
-ಜೀರ್ಣವಾಗದ ಯಾವ ಆಹಾರಗಳನ್ನು ಸೇವಿಸಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಬೀರುತ್ತದೆ.
-ವ್ಯಕ್ತಿಗೆ ಜೀವನದಲ್ಲಿ ಅವಮಾನವಾಗುವುದು ಸಹಜ. ಆದರೆ ಅದನ್ನೇ ಮತ್ತೆ ಮತ್ತೆ ನೆನೆಸಿಕೊಂಡು ಜೀವನವಿಡೀ ಕೊರಗಬೇಡಿ. ನಿಮಗೆ ಅವಮಾನವಾಗುವ ಸ್ಥಳಕ್ಕೆ ಎಂದಿಗೂ ಹೋಗಬೇಡಿ.
-ಜೀವನದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅಹಂಕಾರವನ್ನು ಇಟ್ಟುಕೊಳ್ಳಬೇಡಿ. ಏಕೆಂದರೆ ಅದರಿಂದಾಗುವ ನಷ್ಟವನ್ನು ಎಂದಿಗೂ ಭರಿಸಲಾಗುವುದಿಲ್ಲ.
-ನಿಮ್ಮ ತಪ್ಪಿನ ಬಗ್ಗೆ ಕ್ಷಮೆ ಕೇಳಿದ ನಂತರವೂ ನಿಮ್ಮ ಮಾತನ್ನು ಕೇಳದ ವ್ಯಕ್ತಿಯ ಬಳಿ ಹೋಗಬೇಡಿ. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ.
ನೀವು ಆರೋಗ್ಯವಾಗಿರಲು ಈ ವಾಸ್ತು ಸಲಹೆಯನ್ನು ಪಾಲಿಸಿ
-ಸತ್ಯವನ್ನು ಕೇಳಲು ಒಪ್ಪದ ಮತ್ತು ಸತ್ಯವನ್ನು ಕೇಳಿದ ಮೇಲೂ ನಿಮ್ಮ ಮೇಲೆ ಕೋಪಿಸಿಕೊಳ್ಳುವ ಜನರ ಬಳಿ ಇರಬೇಡಿ.