Kannada Duniya

ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಈ ಪರಿಹಾರ ಮಾಡಿ….!

ವ್ಯಾಪಾರ, ವ್ಯವಹಾರ ನಡೆಸುವವರಿಗೆ ಆಗಾಗ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಕೆಲವರಿಗೆ ವ್ಯಾಪಾರದಲ್ಲಿ ತುಂಬಾ ಲಾಭ ಸಿಗುತ್ತದೆ. ಕೆಲವರಿಗೆ ಎಷ್ಟೇ ಕಷ್ಟಪಟ್ಟರೂ ಪ್ರಗತಿ ಕಾಣಲು ಸಾಧ್ಯವಾಗುವುದಿಲ್ಲ. ಅಂತವರು ವ್ಯವಹಾರದಲ್ಲಿ ಪ್ರಗತಿ ಕಾಣಲು ಈ ಪರಿಹಾರ ಮಾಡಿ.

ಪ್ರತಿ ಮಂಗಳವಾರದಂದು 11 ಅರಳೀಮರದ ಎಲೆಗಳನ್ನು ತೆಗೆದುಕೊಂಡು ಬಂದು ಸ್ವಚ್ಛಗೊಳಿಸಿ ಪ್ರತಿ ಎಲೆಯ ಮೇಲೆ ಕೆಂಪು ಚಂದನದಿಂದ ರಾಮ ರಾಮ ಎಂದು ಬರೆಯಿರಿ. ಬಳಿಕ ಈ ಎಲೆಗಳನ್ನು ಹನುಮಂತನ ದೇವಸ್ಥಾನಕ್ಕೆ ಅರ್ಪಿಸಿ. ಇದರಿಂದ ವ್ಯವಹಾರದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.

ವ್ಯವಹಾರದ ವಿಚಾರಕ್ಕೆ ಹೊರಗಡೆ ಹೋಗುವಾಗ 11 ರೂ ನಾಣ್ಯವನ್ನು ರಹಸ್ಯವಾದ ಸ್ಥಳದಲ್ಲಿ ಇರಿಸಿ. ಪ್ರಯಾಣ ಮಾಡಿ ಮನೆಗೆ ಬಂದ ಬಳಿಕ ಅದನ್ನು ಸಾಧು, ಪಂಡಿತರಿಗೆ ದಾನ ಮಾಡಿ. ಇದರಿಂದ ನಿಮ್ಮ ವ್ಯವಹಾರದಲ್ಲಿ ಏಳಿಗೆ ಕಾಣುತ್ತೀರಿ.

 ಹಣ ಮತ್ತು ಪ್ರೀತಿಯ ನಡುವೆ ನೀವು ಯಾರನ್ನು ಆರಿಸುತ್ತೀರಿ, ಈ ಜನರು ಯಾವಾಗಲೂ ಪ್ರೀತಿಯನ್ನು ಆಯ್ಕೆ ಮಾಡುತ್ತಾರೆ….!

ಪ್ರತಿ ಶನಿವಾರ ಅಂಗಡಿಯ ಮುಖ್ಯ ದ್ವಾರದಲ್ಲಿ 1 ನಿಂಬೆ ಹಣ್ಣು ಮತ್ತು 7 ಹಸಿಮೆಣಸಿನಕಾಯಿಯನ್ನು ಕಟ್ಟಿ. ಪ್ರತಿದಿನ ಸಂಜೆ ಲಕ್ಷ್ಮಿದೇವಿಯ ಫೋಟೊದ ಮುಂದೆ ತುಪ್ಪದ ದೀಪ ಹಚ್ಚಿ. ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ಶಿವಲಿಂಗವನ್ನು ಸ್ಥಾಪಿಸಿ. ಇದರಿಂದ ಧನಾತ್ಮಕ ಶಕ್ತಿ ನೆಲೆಸಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...